ಕರ್ನಾಟಕ

karnataka

By

Published : Mar 25, 2020, 6:00 PM IST

ETV Bharat / state

ಕೊರೊನಾ ಭೀತಿ ಮಧ್ಯೆ ಯುಗಾದಿ ಆಚರಿಸಿದ ಹಾವೇರಿಯ ರೈತರು

ಈ ಬಾರಿ ಯುಗಾದಿ ಸಂಭ್ರಮಕ್ಕೆ ಕೊರೊನಾ ಕರಿಛಾಯೆ ಆವರಿಸಿದೆ. ನಗರ ಪ್ರದೇಶಗಳಲ್ಲಿ ಹಬ್ಬದ ಯಾವುದೇ ಆಚರಣೆಗಳು ಕಂಡು ಬರುತ್ತಿಲ್ಲ. ಆದರೆ ಹಾವೇರಿಯ ಗ್ರಾಮೀಣ ಭಾಗದಲ್ಲಿ ಮಾತ್ರ ರೈತರು ವರ್ಷದ ಮೊದಲ ಹಬ್ಬ ಯುಗಾದಿ ಆಚರಿಸಿದರು. ತಮ್ಮ ಎತ್ತುಗಳನ್ನು ಸಿಂಗರಿಸಿಕೊಂಡು ಹೊಲಕ್ಕೆ ಹೋಗಿ ಪೂಜೆ ಸಲ್ಲಿಸಿದರು.

ಯುಗಾದಿ ಆಚರಿಸಿದ ಹಾವೇರಿಯ ರೈತರು
ಯುಗಾದಿ ಆಚರಿಸಿದ ಹಾವೇರಿಯ ರೈತರು

ಹಾವೇರಿ: ಕೊರೊನಾ ಭೀತಿ ಹಿನ್ನೆಲೆ ದೇಶಕ್ಕೆ ದೇಶವೇ ಲಾಕ್​​ಡೌನ್ ಆಗಿದೆ. ಜಿಲ್ಲೆಯಲ್ಲಿಯೂ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.

ನಗರ ಪ್ರದೇಶಗಳಲ್ಲಿ ಯುಗಾದಿ ಹಬ್ಬದ ಕಳೆ ಮಾಯವಾಗಿದೆ. ಆದರೆ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ರೈತರು ವರ್ಷದ ಮೊದಲ ಹಬ್ಬ ಯುಗಾದಿ ಆಚರಿಸಿದರು. ತಮ್ಮ ಎತ್ತುಗಳನ್ನು ಸಿಂಗರಿಸಿಕೊಂಡು ಹೊಲಕ್ಕೆ ಹೋಗಿ ಪೂಜೆ ಸಲ್ಲಿಸಿದರು.

ಯುಗಾದಿ ಆಚರಿಸಿದ ಹಾವೇರಿಯ ರೈತರು

ಭೂ ತಾಯಿಗೆ ನಮಿಸಿ ಉತ್ತಮ ಮಳೆ ಬೆಳೆ ಬರಲಿ ಎಂದು ಬೇಡಿಕೊಂಡರು. ಯುಗಾದಿ ವಿಶೇಷವಾದ ಬೇವನ್ನು ಭೂ ತಾಯಿಗೆ ನೈವೇದ್ಯ ಮಾಡಿ ವರ್ಷ ಪೂರ್ತಿ ತಮ್ಮ ಬಾಳು ಸಿಹಿಯಾಗಿರುವಂತೆ ನೋಡಿಕೊಳ್ಳಮ್ಮ ಎಂದು ಬೇಡಿಕೊಂಡರು.

ABOUT THE AUTHOR

...view details