ಕರ್ನಾಟಕ

karnataka

By

Published : Aug 21, 2019, 4:09 AM IST

Updated : Aug 21, 2019, 7:24 AM IST

ETV Bharat / state

ನೆರೆ ಸಂತ್ರಸ್ತರಿಗೆ ಮಿಡಿದ ಸವಿತಾ ಸಮಾಜ... ಪ್ರವಾಹ ಪೀಡಿತರಿಗೆ ಉಚಿತವಾಗಿ ಕಟಿಂಗ್​ ಶೇವಿಂಗ್​

ಶಿವಮೊಗ್ಗದ ಸವಿತಾ ಸಮಾಜ ಮಂಗಳವಾರ ಹಾವೇರಿ ಜಿಲ್ಲೆಯ ನೆರೆಪೀಡಿತ ಗ್ರಾಮದ ಪುರುಷರಿಗೆ ಉಚಿತ ಕಟಿಂಗ್ ಮತ್ತು ಶೇವಿಂಗ್​ ಮಾಡಿದ್ದಾರೆ.

ಕಟಿಂಗ್​ ಶೇವಿಂಗ್

ಹಾವೇರಿ:ಜಿಲ್ಲೆಯ ನೆರೆಪೀಡಿತ ಗ್ರಾಮಗಳಿಗೆ ಹಲವು ಸಂಘ ಸಂಸ್ಥೆಗಳು ಸಹಾಯ ಹಸ್ತ ಚಾಚಿವೆ. ಈ ಮಧ್ಯೆ ಶಿವಮೊಗ್ಗ ಸವಿತಾ ಸಮಾಜ ಮಂಗಳವಾರ ಹಾವೇರಿ ಜಿಲ್ಲೆಯ ನೆರೆಪೀಡಿತ ಗ್ರಾಮದ ಪುರುಷರಿಗೆ ಉಚಿತ ಕಟಿಂಗ್ ಮತ್ತು ಶೇವಿಂಗ್​ ಮಾಡಿದ್ದಾರೆ.

ನೆರೆ ಸಂತ್ರಸ್ಥರಿಗೆ ಉಚಿತವಾಗಿ ಕಟಿಂಗ್​ ಶೇವಿಂಗ್​ ಮಾಡಿದ ಶಿವಮೊಗ್ಗ ಸವಿತಾ ಸಮಾಜದ ಸದಸ್ಯರು

ನೆರೆ ಸಂತ್ರಸ್ತ ಗ್ರಾಮಗಳಾದ ನಾಗನೂರು, ಹಲಸೂರು, ಕೂಡಲ ಸೇರಿದಂತೆ ವಿವಿಧ ಗ್ರಾಮಗಳಿಗೆ ತೆರಳಿದ ಸಮಾಜದ ಸದಸ್ಯರು ನೆರೆ ಸಂತ್ರಸ್ತರಿಗೆ ಉಚಿತ ಕಟಿಂಗ್ ಮತ್ತು ಶೇವಿಂಗ್​ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ಸವಿತಾ ಸಮಾಜದ ನಾಗರಾಜ, ಮಧು, ಪ್ರಶಾಂತ್ ಮತ್ತು ಗಿರೀಶ್ ಸೇರಿದಂತೆ ವಿವಿಧ ಸದಸ್ಯರು ಪಾಲ್ಗೊಂಡಿದ್ದರು. ಸವಿತಾ ಸಮಾಜದ ಕಾರ್ಯಕ್ಕೆ ನೆರೆ ಸಂತ್ರಸ್ತ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.

Last Updated : Aug 21, 2019, 7:24 AM IST

ABOUT THE AUTHOR

...view details