ಕರ್ನಾಟಕ

karnataka

ETV Bharat / state

ರಾಜ್ಯದ ಅಭಿವೃದ್ಧಿಗೆ ‌ಮೈತ್ರಿ ಸರ್ಕಾರದಲ್ಲಿ ಹಲವು‌ ಯೋಜನೆಗಳು: ಸಿಎಂ ಕುಮಾರಸ್ವಾಮಿ

ನಮ್ಮದು ಜನರಿಗಾಗಿ ಹೋರಾಡುವ ಕುಟುಂಬ. ಮಂಡ್ಯದಲ್ಲಿ ನಿಖಿಲ್, ಹಾಸನದಲ್ಲಿ ಪ್ರಜ್ವಲ್ ಬಹುಮತದೊಂದಿಗೆ ಗೆಲ್ಲುತ್ತಾರೆ ಎಂದು ಸಿಎಂ ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

By

Published : Mar 22, 2019, 7:50 PM IST

ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ

ಹಾಸನ: ರಾಜ್ಯದ ಮೈತ್ರಿ ಸರ್ಕಾರದಲ್ಲಿ ಹಲವು ಅಭಿವೃದ್ಧಿ ಕಾರ್ಯಕ್ರಮಗಳ ಯೋಜನೆ ರೂಪಿಸಲಾಗಿದೆ‌ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮೈತ್ರಿ ಸರ್ಕಾರದಲ್ಲಿ ಸುಮಾರು 47 ಸಾವಿರ ಕೋಟಿ ರೈತರ ಸಾಲಮನ್ನಾ ಮಾಡಲಾಗಿದೆ. ರಾಜ್ಯದ ಅಭಿವೃದ್ಧಿ ಸರ್ಕಾರದ ಉದ್ದೇಶವಾಗಿದೆ. ರೈತರ ಸಾಲಮನ್ನಾ ವಿಚಾರವನ್ನು ಬಿಜೆಪಿ ರಾಜ್ಯಾಧ್ಯಕ್ಷರು ಟೀಕಿಸಿದ್ದಾರೆ‌. ಯಾವುದಾದರು ಒಂದು ಯೋಜನೆ ಘೋಷಣೆಯಾದಾಗ 24 ಗಂಟೆಯೊಳಗೆ ಸಾಲ‌ಮನ್ನಾ ಮಾಡಲು ಆಗುವುದಿಲ್ಲ ಎಂದು ಬಿಜೆಪಿಗೆ ಟಾಂಗ್ ನೀಡಿದರು.

ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ

ಪ್ರಧಾನಿ ನರೇಂದ್ರ ಮೋದಿಯವರು ರೈತ ಕಿಸಾನ್ ಯೋಜನೆ ಘೋಷಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಈ ಯೋಜನೆಯನ್ನು ಘೋಷಿಸಿದರು. ಆದರೆ, ಕೇಂದ್ರ ಸಚಿವರಾದ ಅರುಣ್ ಜೇಟ್ಲಿ ಎಡಪಕ್ಷಗಳ ಆಡಳಿತದ ರಾಜ್ಯದಲ್ಲಿ ನಮಗೆ ಸರಿಯಾದ ಸಹಕಾರ ನೀಡುತ್ತಿಲ್ಲ. ಆದ್ದರಿಂದ ನಮಗೆ ಈ ಹಣವನ್ನು ಬಿಡುಗಡೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಸುಳ್ಳು ಹೇಳುತ್ತಿದ್ದಾರೆ‌ ಎಂದು ಸಿಎಂ ದೂರಿದರು.

ರಾಜ್ಯದಿಂದ ಈಗಾಗಲೇ ರೈತರ ಅರ್ಜಿಯನ್ನು ಕೇಂದ್ರಕ್ಕೆ ಕಳಿಸಲಾಗಿದೆ‌. ಆದರೆ ಇಲ್ಲಿಯವರೆಗೆ ಸರಿಯಾದ ಹಣ ಬಿಡುಗಡೆಯೇ ಆಗಿಲ್ಲ. ಮಧ್ಯವರ್ತಿಗಳ ಹಾವಳಿ ತಪ್ಪಿಸುವ ನಿಟ್ಟಿನಲ್ಲಿ ವೈಜ್ಞಾನಿಕವಾಗಿ ಸಾಲಮನ್ನಾಕ್ಕೆ ಕ್ರಮ‌ ತೆಗೆದುಕೊಳ್ಳಲಾಗಿದೆ. ನಾವು ಇಲ್ಲಿಯವರೆಗೂ ಯಾರಿಗೂ ಟೋಪಿ ಹಾಕಿ ರಾಜಕೀಯಕ್ಕೆ ಬಂದವರಲ್ಲ. ಯಾರ್ಯಾರು ಟೋಪಿ ಹಾಕಿ ಬಂದಿದ್ದಾರೆ ಎಂಬುದು ಜನತೆಗೆ ಗೊತ್ತಿದೆ ಎಂದರು.

ನಾಡಿನ ಎಲ್ಲಾ ರೀತಿಯ ಸಮಗ್ರ ಅಭಿವೃದ್ಧಿಗೆ ನಾವು ಬದ್ಧರಾಗಿದ್ದೇವೆ. ಧಾರವಾಡದಲ್ಲಿ ಸಂಭವಿಸಿದ ಘಟನೆ, ಸುಳ್ವಾಡಿ ಘಟನೆಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದೇವೆ. ಬಿಜೆಪಿಯವರ ರೀತಿ ನಾವು ನಮ್ಮ ಯೋಜನೆಗಳನ್ನು ಘೋಷಣೆಗೆ ಸೀಮಿತಗೊಳಿಸಿಲ್ಲ. ಎಲ್ಲಾ ಯೋಜನೆಗಳನ್ನ ಜಾರಿಗೆ ತಂದಿದ್ದೇವೆ. ನರೇಗಾ ಯೋಜನೆಯಿಂದ ರಾಜ್ಯಕ್ಕೆ ಬರಬೇಕಿದ್ದ 2500 ಕೋಟಿ ರೂಪಾಯಿ ನೀಡಿಲ್ಲ. ಬರಗಾಲದ ವಿಚಾರವಾಗಿ ಸರಿಯಾದ ಹಣ ಬಿಡುಗಡೆ ಮಾಡಲಿಲ್ಲ ಎಂದು ಸಿಎಂ ಆರೋಪಿಸಿದರು.

ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ನಮ್ಮ ಜನಪರ ಸರ್ಕಾರವನ್ನ ಬೆಂಬಲಿಸಿ ಎಂದು ಮನವಿ ಮಾಡಿದ ಅವರು, ಮೋದಿಯವರ ಅಲೆ‌ 2014 ರಲ್ಲಿ‌‌ತ್ತು. ಅದು ಸುನಾಮಿ ಎಬ್ಬಿಸಿ ಮರೆಯಾಗಿದೆ. ರಾಜ್ಯದ ನಾಯಕರ ಹೇಳಿಕೆಯನ್ನು ನಾನು ಗಮನಿಸಿದ್ದೇನೆ. ಮೋದಿಯ ಹೆಸರಿನಲ್ಲಿ ಇವರು ಮತ ಕೇಳಬೇಕಿದೆ. ಆದರೆ, ಇವರ ಬೆಲೆ ಏನೆಂದು ಗೊತ್ತಿದೆ ಎಂದರು.

ದೇವೇಗೌಡರು ಇಂದು ಅಥವಾ ನಾಳೆ ತಾವು ಎಲ್ಲಿ ಸ್ಪರ್ಧಿಸಬೇಕು ಎಂದು ತಿಳಿಸುತ್ತಾರೆ. ತುಮಕೂರು ಮತ್ತು ಬೆಂಗಳೂರು ಉತ್ತರ ಕ್ಷೇತ್ರಗಳಲ್ಲಿ ಅವರು ಸ್ಪರ್ಧಿಸಬೇಕೆಂಬ ಒತ್ತಡವಿದೆ. ನಾನು 1996 ರಲ್ಲಿ ಚುನಾವಣೆ ಎದುರಿಸಿದಾಗ ನನ್ನನ್ನೂ ಕನಕಪುರದ ಜನ ಒಂದು‌ ಲಕ್ಷಕ್ಕಿಂತ ಹೆಚ್ಚು ಮತದಿಂದ ಗೆಲ್ಲಿಸಿದ್ದರು. ನಮ್ಮದು ಜನರಿಗಾಗಿ ಹೋರಾಡುವ ಕುಟುಂಬ. ಮಂಡ್ಯದಲ್ಲಿ ನಿಖಿಲ್, ಹಾಸನದಲ್ಲಿ ಪ್ರಜ್ವಲ್ ಜಯ ಗಳಿಸುತ್ತಾರೆ ಕುಮಾರಸ್ವಾಮಿ ವಿಶ್ವಾಸ ವಿಸ್ವಾಸ ವ್ಯಕ್ತಪಡಿಸಿದರು.

ABOUT THE AUTHOR

...view details