ಗದಗ: ಕರ್ತವ್ಯನಿರತ ಕೊರೊನಾ ವಾರಿಯರ್ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ನಡೆದಿದೆ.
ಗದಗ: ಕರ್ತವ್ಯನಿರತ ಕೊರೊನಾ ವಾರಿಯರ್ ಹೃದಯಾಘಾತದಿಂದ ಸಾವು
ಮೃತ ವ್ಯಕ್ತಿ ಆ್ಯಂಬ್ಯುಲೆನ್ಸ್ ಚಾಲಕನಾಗಿದ್ದು,ಕೊಣ್ಣೂರ ಗ್ರಾಮದಲ್ಲಿ ಕರ್ತವ್ಯದಲ್ಲಿದ್ದಾಗ ಹೃದಯಾಘಾತ ಸಂಭವಿಸಿದೆ. ಬಳಿಕ ಉಮೇಶ್ ಅವರನ್ನು ಧಾರವಾಡದ ಎಸ್ಡಿಎಂಸಿ ಆಸ್ಪತ್ರೆಗೆ ರವಾನೆ ಮಾಡಿದ್ದು,ಮಾರ್ಗ ಮಧ್ಯದಲ್ಲೆ ಕೊನೆಯುಸಿರೆಳೆದಿದ್ದಾರೆ.
ಕರ್ತವ್ಯದಲ್ಲಿದ್ದ ಕೊರೊನಾ ವಾರಿಯರ್ ಹೃದಯಾಘಾತದಿಂದ ಸಾವು
ಉಮೇಶ್ (37) ಮೃತ ವ್ಯಕ್ತಿ. ಇವರು ಆ್ಯಂಬ್ಯುಲೆನ್ಸ್ ಚಾಲಕನಾಗಿದ್ದು,ಕೊಣ್ಣೂರ ಗ್ರಾಮದಲ್ಲಿ ಕರ್ತವ್ಯದಲ್ಲಿದ್ದಾಗ ಹೃದಯಾಘಾತ ಸಂಭವಿಸಿದೆ. ಬಳಿಕ ಉಮೇಶ್ ಅವರನ್ನು ಧಾರವಾಡದ ಎಸ್ಡಿಎಂಸಿ ಆಸ್ಪತ್ರೆಗೆ ರವಾನೆ ಮಾಡಿದ್ದು,ಮಾರ್ಗ ಮಧ್ಯದಲ್ಲೆ ಕೊನೆಯುಸಿರೆಳೆದಿದ್ದಾರೆ.
ಇನ್ನು, ಈ ಬಗ್ಗೆ ಗದಗ ಡಿಎಚ್ಓ ಡಾ.ಸತೀಶ್ ಬಸರಿಗಿಡದಗೆ ಪ್ರತಿಕ್ರಿಯಿಸಿ ನನಗೆ ವಿಷಯ ಗೊತ್ತಿಲ್ಲ. ಕೊಣ್ಣೂರ ಗ್ರಾಮ ನನ್ನ ವ್ಯಾಪ್ತಿಗೆ ಬರಲ್ಲ, ಎಮರ್ಜೆನ್ಸಿಗೆ ವ್ಯಾಪ್ತಿಗೆ ಬರುತ್ತೆ ಎಂದಿದ್ದಾರೆ.