ಹುಬ್ಬಳ್ಳಿ:ಫೇಸ್ಬುಕ್ ಪ್ರೊಫೈಲ್ನಲ್ಲಿ ' ಮೈ ಭೀ ಚೌಕಿದಾರ್' ಎಂದು ಬರೆದುಕೊಂಡಿದ್ದ ರೈಲ್ವೆ ಸುರಕ್ಷಾ ದಳದ ( ಆರ್ಪಿಎಫ್) ಎಸ್ಐಗೆ ಜಿಲ್ಲಾ ಚುನಾವಣಾಧಿಕಾರಿ ದೀಪಾ ಚೋಳನ್ ನೋಟಿಸ್ ಜಾರಿಗೊಳಿಸಿದ್ದಾರೆ.
ಲಕ್ಷ್ಮಣ ಪಾಟೀಲ್ ಎಂಬುವರು ನೈಋತ್ಯ ರೈಲ್ವೇ ವಲಯದ ಭದ್ರತಾ ಪೋಲಿಸ್ ಎಎಸ್ಐ ಆಗಿ ಕಾರ್ಯನಿರ್ವಹಿಸುತ್ತಿದ್ದು, ತಮ್ಮ ಫೇಸ್ಬುಕ್ ಅಕೌಂಟ್ನಲ್ಲಿ ಮೋದಿಪರ ಪ್ರಚಾರದ ಚೌಕಿದಾರ್ ಹೆಸರನ್ನು ಬಳಸಿಕೊಂಡು ಪೋಸ್ಟ್ ಮಾಡಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.