ಧಾರವಾಡ: ಕರಾವಳಿ ಭಾಗ ಹಿಂದುತ್ವದ ಲ್ಯಾಬರೋಟರಿ ಎಂಬ ಪ್ರತಿಪಕ್ಷ ಸಿದ್ದರಾಮಯ್ಯ ಅವರ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಧಾರವಾಡದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿರುಗೇಟು ನೀಡಿದ್ದಾರೆ. ಧಾರವಾಡದಲ್ಲಿ ವಿಧಿ ವಿಜ್ಞಾನ ವಿಶ್ವವಿದ್ಯಾಲಯ ಶಂಕು ಸ್ಥಾಪನೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸಲಿರುವ ಹಿನ್ನೆಲೆ ಕರ್ನಾಟಕ ವಿವಿಯ ಹಲವು ಮೈದಾನಗಳನ್ನು ವೀಕ್ಷಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಿಂದುತ್ವದ ಲ್ಯಾಬೋರೇಟರಿ ಆಗಬಾರದಾ..? ನೀವು ಹಿಂದುತ್ವ, ಹಿಂದೂ ವಿರೋಧಿನಾ.. ಸಿದ್ದರಾಮಯ್ಯ ಬೇಸಿಕಲಿ ದ್ವಂದದಲ್ಲಿದ್ದಾರೆ ಎಂದು ಹೇಳಿದರು.
ಹೀಗಾಗಿ ಅವರು ಕ್ಷೇತ್ರ ಇಲ್ಲದ ಕಾರಣ ಕನಫ್ಯೂಸ್ ಅಲ್ಲಿ ಏನೆನೋ ಮಾತನಾಡಿರುತ್ತಾರೆ. ಡಿಸ್ಟರ್ಬ್ ಆಗಿ ಏನೇನೋ ಮಾತನಾಡುತ್ತಿದ್ದಾರೆ. ನಮಗೆ ಸಹಮತಿ ಇಲ್ಲದ ಪಾರ್ಟಿಯಲ್ಲಿದ್ದಾರೆ ಅವರು. ಆದರೆ ಅವರ ಬಗ್ಗೆ ಉತ್ತಮ ರಾಜಕಾರಣಿ ಅನ್ನೋ ಭಾವನೆ ಇತ್ತು ನಮಗೆ. ಆದ್ರೆ ಇತ್ತೀಚೆಗೆ ಅವರು ಸೋತ ನಂತರ ಕ್ಷೇತ್ರವೇ ಇರಲಾರದ ಸ್ಥಿತಿ ನಿರ್ಮಾಣ ಆಗಿದೆ. ರಾಹುಲ್ ಗಾಂಧಿ ಸಹವಾಸದಲ್ಲಿ ಜಾಸ್ತಿ ಇರುವುದರಿಂದ ಈಗ ಏನೇನೋ ಮಾತನಾಡುತ್ತಿದ್ದಾರೆ ಎಂದು ಜೋಶಿ ತಿರುಗೇಟು ನೀಡಿದ್ದಾರೆ.
ಹಿಟ್ಲರ್ ಹಾಗೂ ಮುಸಲೋನಿಗೆ ಹೋಲಿಸಿದ್ದಾರೆ. ಹೌದು ಅವರ ಪಾರ್ಟಿಯಲ್ಲಿ ಏನಿದೆ..? ಇವತ್ತಿಗೂ ಪಾಪ ಖರ್ಗೆಯವರನ್ನ ಅಧ್ಯಕ್ಷ ಅಂತ ಒಪ್ಪಿಕೊಳ್ಳಲು ತಯಾರಿಲ್ಲ ಇವರು. ಸಿದ್ದರಾಮಯ್ಯ, ರಾಹುಲ್ ಗಾಂಧಿ ವಿಚಾರವನ್ನು ಪ್ರಚಾರ ಮಾಡ್ತೀವಿ ಅಂತಾರೆ. ಚುನಾಯಿತ ಅಧ್ಯಕ್ಷ ಕೇವಲ ನಾಮಾಕಾವಸ್ಥೆ. ಮೋದಿ ಸಾಹೇಬರು ಒಬ್ಬ ಚುನಾಯಿತ ಪ್ರಧಾನ ಮಂತ್ರಿ. ಅಪಾಯಿಂಟ್ ಅಲ್ಲ, ಗಾಂಧಿ ಪರಿವಾರದಿಂದ ಬಂದಿದ್ದಾರೆ ಅಂತ ಪ್ರಧಾನಿ ಆಗಿಲ್ಲ. ನೀವು ಬೇಕಾದ್ ಹೇಳಿ. ಜನ ಸ್ವೀಕಾರ ಮಾಡಿದ್ದಾರೆ. ಗುಜರಾತ್, ಉತ್ತರಾಖಂಡ್, ಉತ್ತರ ಭಾರತದಲ್ಲಿ ಚುನಾವಣೆ ಆಯಿತು. ಒಂದೇ ಒಂದು ಭಾಗದಲ್ಲಿ ಇವರ ಎಂಪಿಗಳು ಇಲ್ಲ. ಉತ್ತರ ಭಾರತದಲ್ಲಿ ಎಲ್ಲೂ ಇಲ್ಲ. ಹೀಗಾಗಿ ಅವರ ದುಸ್ಥಿತಿ ಇಂದು ಹೀಗಾಗಿ ಎಂದು ಹರಿಹಾಯ್ದರು.
ಮಾಧ್ಯಮದವರು ನೋಡ್ತಿದ್ದೀರಿ. ಮೋದಿಯವರಿಗೆ ಟೀಕೆ ಮಾಡಿದಷ್ಟು, ಹಾಗೆ ಹೊಗಳಿದಷ್ಟು ಬಂದಿದೆ. ಆದ್ರೆ ಅದೇ ಸಂದರ್ಭದಲ್ಲಿ ಮೋದಿ ಟೀಕೆ ಮಾಡಿದಷ್ಟು ಯಾರಿಗೂ ಮಾಡಿಲ್ಲ. ಇಷ್ಟಾದರೂ ಸಹ ಮಾತಾಡ್ತಾರೆ ಅಂದ್ರೆ ಅದು ಅವರ ಮೆಂಟಲ್ ಬ್ಯಾಲೆನ್ಸ್ ತಪ್ಪಿದೆ ಎಂದರು.