ಧಾರವಾಡ: ಜಿಲ್ಲೆಯ ನವಲಗುಂದ ತಾಲೂಕಿನ ಸಟಕನಾಳ ಗ್ರಾಮದ ಬಳಿ ಹಾದು ಹೋಗಿರುವ ಬೆಣ್ಣೆಹಳ್ಳದ ಬಳಿ ಸಿಲುಕಿದ್ದ ಐವರು ರೈತರನ್ನು ರಕ್ಷಿಸಲಾಗಿದೆ.
ಧಾರವಾಡ: ಬೆಣ್ಣೆಹಳ್ಳದಲ್ಲಿ ಸಿಲುಕಿದ್ದ ಐವರು ರೈತರ ರಕ್ಷಣೆ
ಧಾರವಾಡ ಜಿಲ್ಲೆಯಲ್ಲಿ ಮಳೆ ಸುರಿದ ಪರಿಣಾಮ ಬೆಣ್ಣೆಹಳ್ಳ ತುಂಬಿ ಹರಿಯುತ್ತಿದೆ. ಹಳ್ಳದಲ್ಲಿ ನಿನ್ನೆ ರಾತ್ರಿಯಿಂದ ಸಿಲುಕಿ ಪರದಾಡುತ್ತಿದ್ದ ಐವರನ್ನು ರಕ್ಷಿಸಿಲಾಗಿದೆ.
ಬೆಣ್ಣೆಹಳ್ಳದಲ್ಲಿ ಸಿಲುಕಿದ್ದ ಐವರು ರೈತರು ರಕ್ಷಣೆ
ಕಲ್ಲಪ್ಪ ಹಡಪದ, ನವೀನ ಹಡಪದ, ರವಿ, ಚನ್ನವ್ವ ಮತ್ತು ಶೇಖವ್ವ ನಿನ್ನೆ ಜಮೀನಿಗೆ ಹೋದಾಗ ಬೆಣ್ಣೆಹಳ್ಳದ ನೀರು ಸುತ್ತುವರೆದಿತ್ತು. ಬೆಳಗ್ಗೆ ಇವರ ಧ್ವನಿ ಕೇಳಿ ಅಧಿಕಾರಿಗಳಿಗೆ ಸ್ಥಳೀಯರು ವಿಷಯ ತಿಳಿಸಿದ್ದಾರೆ.
ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ. ನಿನ್ನೆ ರಾತ್ರಿ ನವಲಗುಂದ ತಾಲೂಕಿನ ಗುಡಿಸಾಗರದ ಮೂವರನ್ನು ರಕ್ಷಿಸಿಲಾಗಿತ್ತು.
Last Updated : Sep 8, 2020, 1:05 PM IST