ಕರ್ನಾಟಕ

karnataka

By

Published : Feb 26, 2020, 12:02 AM IST

Updated : Feb 26, 2020, 12:08 AM IST

ETV Bharat / state

ಬೇಸಿಗೆಯಲ್ಲಿ ರೈತರಿಗೆ ಯಾವುದೇ ತೊಂದರೆಯಾಗದಂತೆ ಎಚ್ಚರ ವಹಿಸಿ: ಶಾಸಕ ಎಸ್.ರಾಮಪ್ಪ

ಬೇಸಿಗೆ ಆರಂಭವಾಗಿದೆ, ರೈತರಿಗೆ ಯಾವುದೇ ಸಂದರ್ಭದಲ್ಲೂ ವಿದ್ಯುತ್ ಅಭಾವ ಉಂಟಾಗದ ರೀತಿಯಲ್ಲಿ ಮುಂಜಾಗ್ರತವಾಗಿ ಅಧಿಕಾರಿಗಳು ಕ್ರಮ ವಹಿಸಬೇಕು. ರೈತರಿಗೆ ಸ್ಪಂದಿಸಲಿಕ್ಕೆ ಆಗದೇ ಇದ್ದರೆ ತಮ್ಮಷ್ಟಕ್ಕೆ ತಾವೇ ವರ್ಗಾವಣೆ ಮಾಡಿಸಿಕೊಂಡು ಹೋಗಬಹುದು ಎಂದು ಬೆಸ್ಕಾಂ ಅಧಿಕಾರಿಗಳಿಗೆ ಶಾಸಕ ಎಸ್.ರಾಮಪ್ಪ ಎಚ್ಚರಿಕೆ ನೀಡಿದ್ದಾರೆ.

emergency-meeting-of-taluk-level-bescom-officers-at-harihara
emergency-meeting-of-taluk-level-bescom-officers-at-hariharaemergency-meeting-of-taluk-level-bescom-officers-at-harihara

ಹರಿಹರ: ಬೇಸಿಗೆ ಆರಂಭವಾಗಿದೆ, ರೈತರಿಗೆ ಯಾವುದೇ ಸಂದರ್ಭದಲ್ಲೂ ವಿದ್ಯುತ್ ಅಭಾವ ಉಂಟಾಗದ ರೀತಿಯಲ್ಲಿ ಮುಂಜಾಗ್ರತವಾಗಿ ಅಧಿಕಾರಿಗಳು ಕ್ರಮ ವಹಿಸಬೇಕು. ರೈತರಿಗೆ ಸ್ಪಂದಿಸಲಿಕ್ಕೆ ಆಗದೇ ಇದ್ದರೆ ತಮ್ಮಷ್ಟಕ್ಕೆ ತಾವೇ ವರ್ಗಾವಣೆ ಮಾಡಿಸಿಕೊಂಡು ಹೋಗಬಹುದು ಎಂದು ಬೆಸ್ಕಾಂ ಅಧಿಕಾರಿಗಳಿಗೆ ಶಾಸಕ ಎಸ್.ರಾಮಪ್ಪ ಎಚ್ಚರಿಕೆ ನೀಡಿದ್ದಾರೆ.

ಬೆಸ್ಕಾಂ ಅಧಿಕಾರಿಗಳ ತುರ್ತು ಸಭೆ

ನಗರದ ತಾಲೂಕು ಪಂಚಾಯಿತಿ ಆವರಣದಲ್ಲಿನ ಶಾಸಕರ ಭವನದಲ್ಲಿ ನಡೆದ ತಾಲೂಕು ಮಟ್ಟದ ಬೆಸ್ಕಾಂ ಅಧಿಕಾರಿಗಳ ತುರ್ತು ಸಭೆಯಲ್ಲಿ ಮಾತನಾಡಿದ ಅವರು, ಪ್ರತಿದಿನ ನೂರಾರು ರೈತರು ವಿದ್ಯುತ್ ಟ್ರಾನ್ಸಫಾರ್ಮರ್​ ಪೂರೈಕೆ ಸಮರ್ಪಕವಾಗಿಲ್ಲ ಮತ್ತು ಕಳಪೆ ವೈಡಿಂಗ್ ಆರೋಪವನ್ನು ಹೊತ್ತು ನನ್ನ ಮನೆ ಬಾಗಿಲಿಗೆ ಬರುತ್ತಿದ್ದಾರೆ. ರೈತರಿಗೆ ಬೇಕಾದ ಮೂಲ ಸೌಕರ್ಯಗಳನ್ನು ನೀಡುವಲ್ಲಿ ಅಧಿಕಾರಿಗಳು ತಾರತಮ್ಯ ಮಾಡುತ್ತಿದ್ದೀರಿ. ರೈತರ ಕಷ್ಟಗಳಿಗೆ ಸ್ಪಂದಿಸಿ, ಇಲ್ಲವಾದರೆ ವರ್ಗಾವಣೆ ಮಾಡಿಸಿಕೊಂಡು ಹೋಗಿ ಎಂದು ಕಾರ್ಯನಿರ್ವಾಹಕ ಅಭಿಯಂತರರಾದ ವಿಜಯಲಕ್ಷ್ಮೀಗೆ ಎಚ್ಚರಿಕೆ ನೀಡಿದರು.

ರೈತರಿಂದ ತಾಲೂಕಿನ ಬೆಸ್ಕಾಂ ಅಧಿಕಾರಿಗಳ ಮೇಲೆ ನೂರಾರು ಆರೋಪಗಳಿವೆ. 16 ಕೋಟಿ ಹಣದಲ್ಲಿ ಯಾವ ಯಾವ ಊರುಗಳಲ್ಲಿ ಯಾವ ಕೆಲಸ ಮಾಡಿದ್ದೀರಿ ಎಂಬ ಮಾಹಿತಿಗಳನ್ನು ನೀಡಿ. ರೈತರಿಂದ ಹಣ ಕೇಳುವುದನ್ನು ಬಿಟ್ಟು, ರೈತರ ಕಷ್ಟಗಳಿಗೆ ಸ್ಪಂದಿಸಿ, ಇಲ್ಲವಾದರೆ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಜರುಗಿಸುತ್ತೇನೆ ಎಂದರು.

ಸಭೆಯಲ್ಲಿ ಬೆಸ್ಕಾಂ ಸಹಾಯಕ ಕಾರ್ಯನಿರ್ವಹಕ ಅಧಿಕಾರಿಗಳಾದ ಸಿ.ಎನ್.ರಮೇಶ್, ಸವಿತಾ, ಬಸವರಾಜ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವಿಜಯ ಮಹಾಂತೇಶ್, ತಿಪ್ಪೇಶ್ ಹಾಗೂ ರೈತರು ಭಾಗವಹಿಸಿದ್ದರು.

Last Updated : Feb 26, 2020, 12:08 AM IST

ABOUT THE AUTHOR

...view details