ಕರ್ನಾಟಕ

karnataka

By

Published : Jan 23, 2021, 11:23 AM IST

ETV Bharat / state

ಬಂಟ್ವಾಳದಲ್ಲಿ ಚರ್ಚಿಗೆ ನುಗ್ಗಿದ ಕಳ್ಳರು, ಪವಿತ್ರ ಸ್ವತ್ತುಗಳಿಗೆ ಹಾನಿ

ಬಂಟ್ವಾಳ ತಾಲೂಕಿನಲ್ಲಿ ಚರ್ಚಿಗೆ ನುಗ್ಗಿದ ಕಳ್ಳರು ಹಣಕ್ಕಾಗಿ ಹುಡುಕಾಟ ನಡೆಸಿದ್ದು, ಈ ವೇಳೆ ಚರ್ಚಿನ ಕೆಲ ಸ್ವತ್ತುಗಳಿಗೆ ಹಾನಿಯಾಗಿದೆ.

Tried to theft in Bantwal Church
ಬಂಟ್ವಾಳದಲ್ಲಿ ಚರ್ಚಿಗೆ ನುಗ್ಗಿದ ಕಳ್ಳರು

ಬಂಟ್ವಾಳ: ತಾಲೂಕಿನ ನಾವೂರು ಗ್ರಾಮದ ಫರ್ಲ ಚರ್ಚಿಗೆ ನುಗ್ಗಿದ ಕಳ್ಳರು ಹಣಕ್ಕಾಗಿ ಹುಡುಕಾಡಿ ಚರ್ಚಿನ ಸ್ವತ್ತುಗಳಿಗೆ ಹಾನಿ ಮಾಡಿರುವ ಘಟನೆ ನಡೆದಿದೆ.

ಪವಿತ್ರ ಸ್ವತ್ತುಗಳಿಗೆ ಹಾನಿ

ಕಳ್ಳರು ಚರ್ಚಿನೊಳಗೆ ಬರುವ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಚರ್ಚಿನ ಬಾಗಿಲು ಮುರಿದು ಒಳನುಗ್ಗಿರುವ ಕಳ್ಳರು ಹಣಕ್ಕೆ ಹುಡುಕಾಟ ನಡೆಸಿದ್ದು, ಈ ವೇಳೆ ಚರ್ಚಿನ ಕೆಲ ಆಸ್ತಿಗಳಿಗೆ ಹಾನಿಯಾಗಿದೆ.

ಘಟನಾ ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಇದನ್ನೂ ಓದಿ:ಇಂದು ಪರಪ್ಪನ ಅಗ್ರಹಾರ ಜೈಲಿನಿಂದ ತುಪ್ಪದ ಹುಡುಗಿ ಬಿಡುಗಡೆ ಸಾಧ್ಯತೆ

ABOUT THE AUTHOR

...view details