ಕರ್ನಾಟಕ

karnataka

By

Published : Apr 4, 2020, 1:13 PM IST

ETV Bharat / state

ನೆರಿಯ ನದಿಗೆ ವಿಷ ಹಾಕಿದ ಪ್ರಕರಣ, ಮೂವರ ಬಂಧನ..

ಮಾರ್ಚ್‌ 30ರಂದು ರಾತ್ರಿ ನದಿ ನೀರಿಗೆ ವಿಷ ಹಾಕಿದ್ದರಿಂದ ಸುಮಾರು 2 ಕಿ.ಮೀ ವ್ಯಾಪ್ತಿಯಲ್ಲಿ ಮೀನುಗಳು ಸಾವನ್ನಪ್ಪಿದ್ದವು.

ಮೂವರ ಬಂಧನ
ನದಿಗೆ ವಿಷ ಹಾಕಿದ ಪ್ರಕರಣ

ಬೆಳ್ತಂಗಡಿ :ನೆರಿಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋಲ್ನ ನದಿ ನೀರಿಗೆ ಕಿಡಿಗೇಡಿಗಳು ವಿಷ ಹಾಕಿದ್ದರಿಂದ ಹಲವಾರು ಮೀನುಗಳು ಮತ್ತು ನವಿಲೊಂದು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಧರ್ಮಸ್ಥಳ ಪೊಲೀಸರು ಮೂವರನ್ನು ವಶಕ್ಕೆ ಪಡೆದಿದ್ದಾರೆ.

ನೆರಿಯಾ ಹಟ್ಟಾಡಿ ನಿವಾಸಿಗಳಾದ ಹನೀಫ್, ರಫೀಕ್, ಅಶ್ರಫ್ ಎಂಬುವರನ್ನು ಬಂಧಿಸಲಾಗಿದೆ. ಮಾ.30ರಂದು ರಾತ್ರಿ ನದಿ ನೀರಿಗೆ ವಿಷ ಹಾಕಿದ್ದರಿಂದ ಸುಮಾರು 2 ಕಿ.ಮೀ. ವ್ಯಾಪ್ತಿಯ ಮೀನುಗಳು ಸಾವನ್ನಪ್ಪಿದ್ದವು. ಸ್ಥಳಕ್ಕೆ ಭೇಟಿ ನೀಡಿದ್ದ ಅರಣ್ಯ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಜಂಟಿ ತನಿಖೆ ಕೈಗೊಂಡಿರೋ ಅಧಿಕಾರಿಗಳು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ABOUT THE AUTHOR

...view details