ಕರ್ನಾಟಕ

karnataka

ETV Bharat / state

ಮುಸ್ಲಿಂ ಬಾಂಧವರಿಂದ ಜ್ಯೂಸ್​​ ವಿತರಣೆ: ಮಂಗಳೂರಲ್ಲಿ ಸೌಹಾರ್ದ ಶಿವರಾತ್ರಿ

ಶಿವರಾತ್ರಿ ಪ್ರಯುಕ್ತ ನಗರದ ಬಂದರ್ ಸಮೀಪ ಇರುವ ನೀರೇಶ್ವಾಲ್ಯದ ಶ್ರೀ ಪರಮೇಶ್ವರ ದೇವಸ್ಥಾನದ (ನಿತ್ಯಾನಂದ ಆಶ್ರಮ) ದೇವರ ಉತ್ಸವ ಸಂದರ್ಭ ಕಂದಕ್ ಬಳಿ ಮುಸ್ಲಿಂ ಬಾಂಧವರು ಜ್ಯೂಸ್ ಹಂಚಿ ಸೌಹಾರ್ದತೆ ಮೆರೆದರು.

By

Published : Feb 21, 2020, 11:40 PM IST

juice-distribution-by-muslim-community-on-occasion-of-shiva-ratri
ಮುಸ್ಲಿಂ ಬಾಂಧವರಿಂದ ಜ್ಯೂಸ್ ವಿತರಣೆ

ಮಂಗಳೂರು: ಶಿವರಾತ್ರಿ ಪ್ರಯುಕ್ತ ನಗರದ ಬಂದರ್ ಸಮೀಪ ಇರುವ ನೀರೇಶ್ವಾಲ್ಯದ ಶ್ರೀ ಪರಮೇಶ್ವರ ದೇವಸ್ಥಾನದ (ನಿತ್ಯಾನಂದ ಆಶ್ರಮ) ದೇವರ ಉತ್ಸವ ಸಂದರ್ಭ ಕಂದಕ್ ಬಳಿ ಮುಸ್ಲಿಂ ಬಾಂಧವರು ಜ್ಯೂಸ್ ಹಂಚಿ ಸೌಹಾರ್ದತೆ ಮೆರೆದರು.

ಮುಸ್ಲಿಂ ಬಾಂಧವರಿಂದ ಜ್ಯೂಸ್ ವಿತರಣೆ

ರಾತ್ರಿ ಏಳೂವರೆ ಹೊತ್ತಿಗೆ ದೇವರ ಉತ್ಸವ ಹೊರಟಿದ್ದು, ಈ ಸಂದರ್ಭ ಮುಸ್ಲಿಂ ಬಾಂಧವರು, ದೇವರ ಉತ್ಸವದಲ್ಲಿ ಭಾಗವಹಿಸಿದ್ದ ಎಲ್ಲಾ ಭಕ್ತಾದಿಗಳಿಗೆ ಕಂದಕ್​ನ ಮನಪಾ ಸದಸ್ಯ ಸುಹೈಲ್ ಕಂದಕ್ ನೇತೃತ್ವದಲ್ಲಿ ಕಂದಕ್ ಮುಸ್ಲಿಂ ಜಮಾಅತ್ ವತಿಯಿಂದ ಜ್ಯೂಸ್ ವಿತರಣೆ ಮಾಡಲಾಯಿತು.

ಈ ಸಂದರ್ಭ ಸುಹೈಲ್ ಕಂದಕ್ ಮಾತನಾಡಿ, ಶಿವರಾತ್ರಿ ಸಂದರ್ಭ ಇಂದು ನಮ್ಮ ವಾರ್ಡ್​ನ ಪರಮೇಶ್ವರ ದೇವಳದ ರಥೋತ್ಸವದ ಹಿನ್ನೆಲೆಯಲ್ಲಿ ಕಂದಕ್ ಮುಸ್ಲಿಂ ಜಮಾಅತ್​ನಿಂದ ತಂಪು ಪಾನೀಯದ ವ್ಯವಸ್ಥೆ ಮಾಡಲಾಗಿದೆ. ಈ ಮೂಲಕ ಎಲ್ಲರೂ ಜಾತಿ, ಮತ ಮರೆತು ಅಣ್ಣ-ತಮ್ಮಂದಿರಂತೆ ಸೌಹಾರ್ದತೆಯಿಂದ ಬದುಕುತ್ತಿದ್ದೇವೆ‌. ಹಲವಾರು ವರ್ಷಗಳಿಂದ ಈ ಕಾರ್ಯವನ್ನು ನಾವು ಇಲ್ಲಿ ಮಾಡುತ್ತಿದ್ದೇವೆ. ಭಾರತೀಯರಾದ ನಾವು ಪ್ರತೀಯೊಂದು ಗಲ್ಲಿಯಲ್ಲೂ ಪ್ರೀತಿ, ಸಹೋದರತೆಯಿಂದ ಬಾಳಬೇಕೆಂಬುದು ಎಲ್ಲರಿಗೂ ನಮ್ಮ ಸಂದೇಶವಾಗಿದೆ ಎಂದು ಹೇಳಿದರು.

ABOUT THE AUTHOR

...view details