ಕರ್ನಾಟಕ

karnataka

By

Published : May 9, 2019, 11:08 AM IST

ETV Bharat / state

ಮಾಧ್ಯಮಗಳೆದುರು ತುಟಿ ಬಿಚ್ಚದ ದೇವೇಗೌಡರು!

ಬೆಂಗಳೂರಿನ ವಿಮಾನ ನಿಲ್ದಾಣದಿಂದ ಬಂದ ಗೌಡರು, ಇಂದು ಬೆಳಗ್ಗೆ 8.30 ಸುಮಾರಿಗೆ ಬಜ್ಪೆ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಬಂದಿಳಿದರು. ಇಲ್ಲಿಂದ ಉಡುಪಿ ರಸ್ತೆಯ ಮೂಲಕ ಖಾಸಗಿ ರೆಸಾರ್ಟ್​ಗೆ ಪ್ರಯಾಣ ಬೆಳೆಸಿದರು.

ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಎಚ್.ಡಿ.ದೇವೇಗೌಡ

ಮಂಗಳೂರು:ಚಿಕಿತ್ಸೆಗಾಗಿ ಉಡುಪಿಗೆ ಬಂದಿರುವ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ಬೆಳಗ್ಗೆ ಮಂಗಳೂರಿನ ಬಜ್ಪೆ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಬಂದಿಳಿದರು. ಈ ಸಂದರ್ಭ ಅವರು ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.

ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ಜೆಡಿಎಸ್‌ ವರಿಷ್ಠ ಎಚ್.ಡಿ.ದೇವೇಗೌಡ ನಿರಾಕರಣೆ

ಪತ್ನಿ ಚೆನ್ನಮ್ಮ ಅವರೊಂದಿಗೆ ಆಗಮಿಸಿದ ಎಚ್.ಡಿ. ದೇವೇಗೌಡ ಪಂಚಕರ್ಮ ಚಿಕಿತ್ಸೆಗಾಗಿ ಉಡುಪಿಯ ಮೂಳೂರಿನಲ್ಲಿರುವ ಖಾಸಗಿ ರೆಸಾರ್ಟ್​ಗೆ ಬಂದಿದ್ದಾರೆ. ಬೆಂಗಳೂರಿನ ವಿಮಾನ ನಿಲ್ದಾಣದಿಂದ ಬಂದ ಅವರು ಇಂದು ಬೆಳಗ್ಗೆ 8.30 ಸುಮಾರಿಗೆ ಬಜ್ಪೆ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಬಂದಿಳಿದರು. ಇಲ್ಲಿಂದ ಉಡುಪಿ ರಸ್ತೆಯ ಮೂಲಕ ಖಾಸಗಿ ರೆಸಾರ್ಟ್​ಗೆ ಪ್ರಯಾಣ ಬೆಳೆಸಿದರು.

ಇಂದು ಅಥವಾ ನಾಳೆ ಅವರು ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಲಿದ್ದು, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಚಂಡಿಕಾ ಯಾಗ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.

ABOUT THE AUTHOR

...view details