ಕರ್ನಾಟಕ

karnataka

ಹೊಳೆಗೆ ಆಯತಪ್ಪಿ ಬಿದ್ದ ಅರಣ್ಯ ವೀಕ್ಷಕ ಸಾವು..

By

Published : Nov 9, 2022, 4:00 PM IST

Updated : Nov 9, 2022, 4:20 PM IST

ಚಿನ್ನಪ್ಪ ಎಂಬ ಅರಣ್ಯ ವೀಕ್ಷಕ ತೊಡಿಕಾನ ಸಮೀಪದ ಮಾವಿನಕಟ್ಟೆ ನರುವೋಳುಮೊಟ್ಟೆಯ ಹೊಳೆಯಲ್ಲಿ ನೀರು ಕುಡಿಯಲು ಹೋಗಿ ಆಯತಪ್ಪಿ ಬಿದ್ದು ಮೃತಪಟ್ಟಿದ್ದಾನೆ.

forest watcher
ಅರಣ್ಯ ವೀಕ್ಷಕ ಚಿನ್ನಪ್ಪ

ದಕ್ಷಿಣ ಕನ್ನಡ:ಅರಣ್ಯ ವೀಕ್ಷಕರೊಬ್ಬರು ಆಯತಪ್ಪಿ ಹೊಳಗೆ ಬಿದ್ದು ಮೃತಪಟ್ಟ ಘಟನೆ ಮಂಗಳವಾರ ಸಂಜೆ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಕೊಡಗು ಜಿಲ್ಲೆಯ ಗಡಿ ಭಾಗವಾದ ಸಂಪಾಜೆ ಸಮೀಪದ ತೊಡಿಕಾನ ಎಂಬಲ್ಲಿ ನಡೆದಿದೆ.

ಮೃತರು ಕೊಡಗು ಜಿಲ್ಲೆಯ ಅರಣ್ಯ ವೀಕ್ಷಕ ಚಿನ್ನಪ್ಪ (58 ವರ್ಷ ) ಎಂದು ಗುರುತಿಸಲಾಗಿದೆ. ಕೊಡಗಿನ ಅರಣ್ಯ ಇಲಾಖೆಯಿಂದ ಭೂಮಿಯ ಸರ್ವೆಗೆ ಹೋಗಿದ್ದ ಚಿನ್ನಪ್ಪ ತೊಡಿಕಾನ ಸಮೀಪದ ಮಾವಿನಕಟ್ಟೆ ನರುವೋಳುಮೊಟ್ಟೆಯ ಹೊಳೆ ಬದಿಯಲ್ಲಿ ನೀರು ಕುಡಿಯಲು ತೆರಳಿದ್ದರು. ಈ ವೇಳೆ ಆಯತಪ್ಪಿ ಹೊಳೆಗೆ ಬಿದ್ದಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಸುದ್ದಿ ತಿಳಿದಾಕ್ಷಣ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಮುಂದಿನ ಕ್ರಮ ಅನುಸರಿಸಿದ್ದಾರೆ.

ಇದನ್ನೂ ಓದಿ:ಶಿವಮೊಗ್ಗ: ತಾಯಿ ಅಂತ್ಯ ಸಂಸ್ಕಾರ ಮುಗಿಸಿ ಮನೆಗೆ ಬರುತ್ತಿದ್ದಂತೆ ಮಗ ಸಾವು

Last Updated : Nov 9, 2022, 4:20 PM IST

ABOUT THE AUTHOR

...view details