ಕರ್ನಾಟಕ

karnataka

By

Published : Jun 30, 2020, 12:22 AM IST

ETV Bharat / state

ಸೋಂಕಿತ ಪೊಲೀಸರನ್ನು ಆಸ್ಪತ್ರೆಗೆ ಕರೆದೊಯ್ಯಲು ವಿಳಂಬ: ಠಾಣೆಯಲ್ಲಿ ಕಾದು ಕುಳಿತ ಸಿಬ್ಬಂದಿ

ಉಳ್ಳಾಲ ಪೊಲೀಸ್​ ಠಾಣೆಯ ಆರು ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಇಲ್ಲಿನ ಕೋವಿಡ್ ಆಸ್ಪತ್ರೆಗೆ ದಾಖಲಿಸಲು ವಿಳಂಬವಾಗಿದೆ. ವಿಷಯ ತಿಳಿದು ಉಪ ಪೊಲೀಸ್ ಆಯುಕ್ತ ಅರುಣಾಂಗ್ಶುಗಿರಿ ಅವರು ಸೋಂಕಿತ ಪೊಲೀಸರನ್ನು ಆಂಬ್ಯುಲೆನ್ಸ್​ ಮೂಲಕ ಆಸ್ಪತ್ರೆಗೆ ದಾಖಲಿಸುವ ವ್ಯವಸ್ಥೆ ಮಾಡಿದರು

Corona infected police neglected to taken for hospital in Ullala
ಸೋಂಕಿತ ಪೊಲೀಸರನ್ನು ಆಸ್ಪತ್ರೆಗೆ ಕೊಂಡೊಯ್ಯದೆ ನಿರ್ಲಕ್ಷ್ಯ: ಠಾಣೆಯಲ್ಲೇ ಕಾದು ಕುಳಿತ ವಾರಿಯರ್ಸ್​​

ಮಂಗಳೂರು (ದ.ಕ):ಕೊರೊನಾ ವಾರಿಯರ್​​​ಗಳಾಗಿ ಶ್ರಮಿಸಿದ ಉಳ್ಳಾಲ ಪೊಲೀಸ್​ ಠಾಣೆಯ ಆರು ಮಂದಿ ಪೊಲೀಸರಿಗೆ ಸೋಂಕು ದೃಢಪಟ್ಟಿದೆ. ಆದರೆ, ಆರೋಗ್ಯ ಇಲಾಖೆಯ ನಿರ್ಲಕ್ಷ್ಯದಿಂದ ಆಸ್ಪತ್ರೆಗೆ ದಾಖಲಾಗದೆ ಚಡಪಡಿಸಿದ ಘಟನೆ ನಡೆದಿದೆ.

ಇಂದು ಬಂದ ಗಂಟಲು ದ್ರವ ತಪಾಸಣಾ ವರದಿಯಲ್ಲಿ ಠಾಣೆಯ ಆರು ಸಿಬ್ಬಂದಿಗೆ ಸೋಂಕು ಇರುವುದು ದೃಢಪಟ್ಟಿತು. ಸೋಂಕಿತ ಪೊಲೀಸರನ್ನು ಕರೆದೊಯ್ಯಲು ಆರೋಗ್ಯ ಇಲಾಖೆಯ ಸಿಬ್ಬಂದಿ ತಡವಾಗಿ ಬಂದಿದ್ದರಿಂದ ಬೆಳಗ್ಗೆಯಿಂದ ಸಂಜೆಯವರೆಗೆ ಪೊಲೀಸ್ ಕ್ವಾಟ್ರಸ್ ಹಾಗೂ ಠಾಣೆಯಲ್ಲಿ ಕಾಯಬೇಕಾಯಿತು.

ಉಳ್ಳಾಲ ಪೊಲೀಸ್ ಠಾಣೆ ​​

ಸಂಜೆಯಾದರೂ ಆರೋಗ್ಯ ಇಲಾಖೆಯ ಸಿಬ್ಬಂದಿ ಸೋಂಕಿತರನ್ನು ಆಸ್ಪತ್ರೆಗೆ ಕರೆದೊಯ್ಯಲು ಬಾರದ ಇರುವುದು ಮೇಲಾಧಿಕಾರಿಗಳ ಗಮನಕ್ಕೆ ಬಂದಿತು. ಉಪ ಪೊಲೀಸ್ ಆಯುಕ್ತ ಅರುಣಾಂಗ್ಶುಗಿರಿ ಅವರು 6 ಮಂದಿ ಸೋಂಕಿತ ಪೊಲೀಸರನ್ನು ಆಂಬ್ಯುಲೆನ್ಸ್​ ಮೂಲಕ ಆಸ್ಪತ್ರೆಗೆ ದಾಖಲಿಸುವ ವ್ಯವಸ್ಥೆ ಮಾಡಿದರು.

ABOUT THE AUTHOR

...view details