ಚಿಕ್ಕಮಗಳೂರು:ಹಣದ ವಿಚಾರದಲ್ಲಿ ಇಬ್ಬರ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ಲಕ್ಕವಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಗಾರೆ ಕೆಲಸ ಮಾಡುವ ಇಬ್ಬರ ನಡುವೆ ಹಣದ ವಿಚಾರವಾಗಿ ಗಲಾಟೆ ನಡೆದಿತ್ತು. ಹತ್ಯೆ ಮಾಡಿದ ಆರೋಪಿ, ಕೊಲೆಯಾದ ವ್ಯಕ್ತಿಯ ಮನೆಗೆ ಹೋಗಿ, ತಾನೇ ಕೊಲೆ ಮಾಡಿದ್ದು ಎಂದು ಮನೆಯವರಿಗೆ ವಿಚಾರ ತಿಳಿಸಿದ್ದಾನೆ. ಈ ವಿಚಾರವನ್ನು ತಿಳಿದ ಕೂಡಲೇ ಮನೆಯವರು ಬೆಚ್ಚಿ ಬಿದ್ದಿದ್ದಾರೆ.
ಲಕ್ಕವಳ್ಳಿ ಗ್ರಾಮದ ರಾಮಯ್ಯ (55) ಕೊಲೆಯಾದ ವ್ಯಕ್ತಿಯಾಗಿದ್ದು, ತೆರ ಚಾಲಯ್ಯ ಎಂಬುವನು ಕೊಲೆ ಮಾಡಿ ರಾಮಯ್ಯ ಮನೆಯವರಿಗೆ ಶವ ಬಿಸಾಕಿದ ಸ್ಥಳ ತೋರಿಸಿ ಸ್ಥಳದಿಂದ ಪರಾರಿಯಾಗಿದ್ದಾನೆ.
ಇವರಿಬ್ಬರು ಗಾರೆ ಕೆಲಸ ಮಾಡುವ ಕಾರ್ಮಿಕರಾಗಿದ್ದು, ಗಾರೆ ಕೆಲಸಕ್ಕೆ ಮುಂಗಡವಾಗಿ ಪಡೆದಿದ್ದ ಹಣವನ್ನು, ಹಂಚಿಕೊಳ್ಳುವ ವಿಚಾರದಲ್ಲಿ ಇಬ್ಬರ ನಡುವೆ ಗಲಾಟೆ ನಡೆದಿದೆ. ಹಣದ ವಿಚಾರವಾಗಿ ರಾಮಯ್ಯನನ್ನು ಕೊಲೆಗೈದು ಗಿಡಗಂಟೆಗಳ ಪೊದೆಯಲ್ಲಿ ತೆರಚಾಲಯ್ಯ ಬಿಸಾಕಿ ಹೋಗಿದ್ದ. ಈ ಕುರಿತು ರಾಮಯ್ಯ ಮನೆಯವರು ಲಕ್ಕವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದಾರೆ.