ಕರ್ನಾಟಕ

karnataka

ಚರಂಡಿ ನೀರು ಪರಿಶೀಲನೆಗೆ ಹೊರಟ ಇಒ ಮೇಲೆ ಹಲ್ಲೆಗೆ ಯತ್ನ !?

By

Published : Jan 23, 2020, 4:15 PM IST

Updated : Jan 23, 2020, 8:02 PM IST

ದೂರಿನ ಪರಿಶೀಲನೆಗೆ ಹೊರಟ ಇಒ ನವೀನ್ ಕುಮಾರ್ ಮೇಲೆ ಹಲ್ಲೆ ಆರೋಪ ಕೇಳಿ ಬಂದಿದೆ. ಚಿಕ್ಕಮಗಳೂರಿನಲ್ಲಿ ಈ ಘಟನೆ ನಡೆದಿದೆ.

ಪರಿಶೀಲನೆಗೆ ಹೊರಟ ಇಒ ಮೇಲೆ ಹಲ್ಲೆಗೆ ಯತ್ನ ಆರೋಪ , Attempts to attack EO  chikmagaluru
ಪರಿಶೀಲನೆಗೆ ಹೊರಟ ಇಒ ಮೇಲೆ ಹಲ್ಲೆಗೆ ಯತ್ನ ಆರೋಪ

ಚಿಕ್ಕಮಗಳೂರು: ಚರಂಡಿ ನೀರು ಬಾವಿಗೆ ಸೇರುತ್ತಿರುವ ಬಗ್ಗೆ ಪರಿಶೀಲನೆ ನಡೆಸಲು ತಾಲೂಕು ಪಂಚಾಯತ್​ನ ಇಒ ಸ್ಥಳಕ್ಕೆ ಹೋದಾಗ, ಸ್ಥಳೀಯ ನಿವಾಸಿಗಳು ಅವರ ಮೇಲೆ ದಬ್ಬಾಳಿಕೆ ನಡೆಸಿ, ಹಲ್ಲೆಗೆ ಯತ್ನ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಇಒ ನವೀನ್ ಕುಮಾರ್ ಅವರಿಗೆ ಈ ಬಗ್ಗೆ ದೂರು ಬಂದ ಹಿನ್ನೆಲೆ ಕಾರಿನಲ್ಲಿ ಪರಿಶೀಲನೆಗಾಗಿ ಹೋಗುತ್ತಿದ್ದರು. ಇವರು ಗ್ರಾಮದ ಸಮೀಪಕ್ಕೆ ಹೋಗುತ್ತಿದ್ದಂತೆ ಕೆಲವರು ಕಾರನ್ನು ತಡೆದು, ಕಾರಿನ ಕೀ ಕಿತ್ತುಕೊಂಡು ಹಲ್ಲೆಗೆ ಮುಂದಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಪರಿಶೀಲನೆಗೆ ಹೊರಟ ಇಒ ಮೇಲೆ ಹಲ್ಲೆಗೆ ಯತ್ನ ಆರೋಪ

ತಮ್ಮನ್ನು ತಳ್ಳಾಡಿದ್ದಲ್ಲದೇ ಏಕ ವಚನದಲ್ಲಿ ಕೆಲ ಸ್ಥಳೀಯರು ಮಾತನಾಡಿದ್ದಾರೆ ಎಂದು ನವೀನ್ ಕುಮಾರ್ ಆರೋಪ ಮಾಡಿದ್ದಾರೆ. ಘಟನೆ ಸಂಬಂಧ ಹರಿಹರಪುರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Last Updated : Jan 23, 2020, 8:02 PM IST

ABOUT THE AUTHOR

...view details