ಚಿಕ್ಕ ಬಳ್ಳಾಪುರ : ಉತ್ತಮ ಮಳೆ ಬೆಳೆಗಾಗಿ ಪ್ರಾರ್ಥಿಸಿ ಜಿಲ್ಲೆಯ ಗುಡಿಬಂಡೆ ಪಟ್ಟಣದ ವಿವಿಧ ವಾರ್ಡ್ ಗಳಲ್ಲಿ ಶ್ರದ್ದಾ ಭಕ್ತಿಯಿಂದ ತಂಬಿಟ್ಟು ಜಾತ್ರಾ ಮಹೋತ್ಸವ ಆಚರಿಸಲಾಯಿತು.
ಪಟ್ಟಣದ 1, 8, 9, 10, 11 ನೇ ವಾರ್ಡ್ ಹಾಗೂ ಗುಡಿಬಂಡೆ ಗ್ರಾಮೀಣ ಹಾಗೂ ಪಟ್ಟಣ ಹೊರವಲಯದ ಅಮಾನಿ ಬೈರಸಾಗರದ ಬಳಿಯಿರುವ ಒಡ್ಡಮ್ಮ ದೇವಿಗೆ, ಬಿ ಬ್ಲಾಕ್ ನ ಮುತ್ಯಾಲಮ್ಮ, ಬಾಪೂಜಿ ನಗರದ ಸಪ್ಪಲಮ್ಮ ದೇವಿಗೆ ಮಹಿಳೆಯರು ಶ್ರದ್ದಾಭಕ್ತಿಯಿಂದ ತಂಬಿಟ್ಟಿನ ಆರತಿ ದೀಪಗಳನ್ನು ಬೆಳಗುವ ಮೂಲಕ ಗ್ರಾಮ ದೇವತೆಗಳಿಗೆ ಆರತಿ ಪೂಜೆ ಸಲ್ಲಿಸಿದರು.