ಕರ್ನಾಟಕ

karnataka

By

Published : Oct 11, 2019, 9:47 PM IST

ETV Bharat / state

ತಿಪ್ಪಗಾನಹಳ್ಳಿ ಕೆರೆಯಲ್ಲಿ ಶವ ಪತ್ತೆ, ಆತ್ಮಹತ್ಯೆ ಶಂಕೆ

ಗೌರಿಬಿದನೂರು ತಾಲೂಕಿನ ತೊಂಡೇಭಾವಿ ಹೋಬಳಿ ವ್ಯಾಪ್ತಿಯ ತಿಪ್ಪಗಾನಹಳ್ಳಿ ಕೆರೆಯಲ್ಲಿ ಎರಡು ಶವ ಪತ್ತೆಯಾಗಿವೆ. ಮೃತರು ಗೀತಾ ಮತ್ತು ರಾಜಣ್ಣ ದಂಪತಿಗಳೆಂದು ಗುರುತಿಸಲಾಗಿದೆ.

ಆತ್ಮಹತ್ಯೆ ಶಂಕೆ

ಚಿಕ್ಕಬಳ್ಳಾಪುರ: ಗೌರಿಬಿದನೂರು ತಾಲೂಕಿನ ತೊಂಡೇಭಾವಿ ಹೋಬಳಿ ವ್ಯಾಪ್ತಿಯ ತಿಪ್ಪಗಾನಹಳ್ಳಿ ಕೆರೆಯಲ್ಲಿ ಎರಡು ಶವ ಪತ್ತೆಯಾಗಿವೆ. ಮೃತರು ಗೀತಾ ಮತ್ತು ರಾಜಣ್ಣ ದಂಪತಿಗಳೆಂದು ಗುರುತಿಸಲಾಗಿದೆ.

ಮೂಲತಃ ದೊಡ್ಡಬಳ್ಳಾಪುರದ ಸಾಸುಲು ಹೋಬಳಿ ವ್ಯಾಪ್ತಿಯ ಉಜ್ಜನಿ ಗ್ರಾಮದ ಗೀತಾ ಮತ್ತು ರಾಜಣ್ಣ, ಯಲಹಂಕದಲ್ಲಿ ವಾಸವಿದ್ದರು. ಹಬ್ಬಕ್ಕೆಂದು ಗೀತಾಳ ತವರೂರು ಯರಪೋತೆನಹಳ್ಳಿಗೆ ಬಂದಿದ್ದರು. ತಿಪ್ಪಗಾನಹಳ್ಳಿ ಪಕ್ಕದಲ್ಲಿರುವ ಜೊಗಾನಹಳ್ಳಿಯಲ್ಲಿ, ನೆಂಟರನ್ನು ನೋಡಿಕೊಂಡು ಬರುವುದಾಗಿ ಹೋದ ದಂಪತಿ ಶವವಾಗಿ ಪತ್ತೆಯಾಗಿದ್ದಾರೆ.

ಮದುವೆಯಾಗಿ 7 ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ ಎಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ.

ABOUT THE AUTHOR

...view details