ಕರ್ನಾಟಕ

karnataka

ETV Bharat / state

ನಾಯಿಗಳ ದಾಳಿಯಿಂದ ರಕ್ಷಿಸಿಕೊಳ್ಳಲು ಗೋಮಾತೆ ಅಪ್ಪಿದ ಜಿಂಕೆ!

ನಾಯಿಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಜಿಂಕೆಯೊಂದು ಗೋಮಾತೆಯನ್ನು ಅಪ್ಪಿದ ಘಟನೆ ನಡೆದಿದೆ. ಕೂಡಲೇ ಅರಣ್ಯಧಿಕಾರಿಗಳು ದೌಡಾಯಿಸಿ ಜಿಂಕೆಯನ್ನು ರಕ್ಷಿಸಿದ್ದಾರೆ‌‌.

By

Published : Aug 24, 2019, 11:54 AM IST

deer

ಚಾಮರಾಜನಗರ: ಆಹಾರ ಅರಸಿ ನಾಡಿಗೆ ಬಂದ ಜಿಂಕೆಯೊಂದು ನಾಯಿಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಗೋಮಾತೆಯನ್ನು ಅಪ್ಪಿದ ಘಟನೆ ಗುಂಡ್ಲುಪೇಟೆ ತಾಲೂಕಿನ ಚಿಕ್ಕಾಟಿಯಲ್ಲಿ ನಡೆದಿದೆ.

ಓಂಕಾರ್ ಅರಣ್ಯ ವಲಯದಿಂದ ಆಹಾರ ಅರಸಿ ಬಂದ 2 ವರ್ಷದ ಗಂಡು ಜಿಂಕೆಗೆ ಬೀದಿನಾಯಿಗಳ ಹಿಂಡು ಎದುರಾಗಿದೆ. ನಾಯಿಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಪಕ್ಕದಲ್ಲೇ ಇದ್ದ ದನದ ಕೊಟ್ಟಿಗೆಗೆ ನುಗ್ಗಿದೆ‌.

ಅರಣ್ಯಾಧಿಕಾರಿಗಳಿಂದ ರಕ್ಷಿಸಲ್ಪಟ್ಟ ಜಿಂಕೆ

ಬಳಿಕ, ರೈತ ಮಹಾದೇವ ನಾಯಿಗಳನ್ನು ಓಡಿಸಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಅರಣ್ಯಧಿಕಾರಿಗಳು ದೌಡಾಯಿಸಿ ಜಿಂಕೆಯನ್ನು ರಕ್ಷಿಸಿದ್ದಾರೆ‌‌.

ABOUT THE AUTHOR

...view details