ಕೊಳ್ಳೇಗಾಲ : ಮಾರುಕಟ್ಟೆಗೆ ರೇಷ್ಮೆ ಗೂಡು ಮಾರಲು ಬಂದಿದ್ದ ಕನಕಪುರದ ರೈತನೊಬ್ಬ ಪದೇ-ಪದೆ ಸೀನುವುದು ಕೆಮ್ಮುವುದು ಮಾಡಿದ್ದರಿಂದ ಕೊರೊನಾ ಇರಬುಹುದೆಂದು ಶಂಕಿಸಿದ ರೀಲರ್ಸ್ಗಳು ವ್ಯಾಪಾರ ವಹಿವಾಟು ಬಿಟ್ಟು ಹೊರಗುಳಿದ ಘಟನೆ ನಡೆದಿದೆ.
ಮಾರುಕಟ್ಟೆಯಲ್ಲಿ ಪದೇ-ಪದೆ ಕೆಮ್ಮಿದ ರೈತ.. ಬೆಚ್ಚಿಬಿದ್ದ ರೀಲರ್ಸ್ !!
ಕೊಳ್ಳೇಗಾಲದ ಮಾರುಕಟ್ಟೆಗೆ ಆಗಮಿಸಿದ್ದ ವ್ಯಕ್ತಿಯೊಬ್ಬ ಪದೇ-ಪದೆ ಸೀನುವುದು ಕೆಮ್ಮುವುದು ಮಾಡಿದ್ದಾನೆ, ಇದರಿಂದ ಮಾರುಕಟ್ಟಯಲ್ಲಿದ್ದವರು ಕೊರೊನಾ ಇರಬಹುದೆಂದು ಶಂಕಿಸಿ ಆತನನ್ನು ವಾಪಸ್ ಮನೆಗೆ ಕಳುಹಿಸಿದ್ದಾರೆ.
ಕೊರೊನಾ ಶಂಕೆ ವ್ಯಕ್ತಪಡಿಸಿದ ರೀಲರ್ಸ್
ಈ ಸಂಬಂಧ ರೀಲರ್ಸ್ಗಳು ಮಾರುಕಟ್ಟೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ, ಅಧಿಕಾರಿಗಳು ಆ ರೈತನನ್ನು ಊರಿಗೆ ವಾಪಸ್ ಕಳಿಹಿಸಿಕೊಟ್ಟಿದ್ದಾರೆ ಎಂದು ತಿಳಿದು ಬಂದಿದ್ದು. ಆತ ತಂದ ಗೂಡನ್ನು ಸಹ ಖರೀದಿಗೆ ಇಡದೆ ಸೀಜ್ ಮಾಡಿ ಇಡಲಾಗಿದೆ.
ಬಳಿಕ ತಹಸೀಲ್ದಾರ್ ಕುನಾಲ್ ಮಾರುಕಟ್ಟೆಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದು. ರೈತರು ಹಾಗೂ ರೀಲರ್ಸ್ಗಳು ಯಾವುದೇ ಆತಂಕ ಪಡುವುದು ಬೇಡ ಸಂಬಂಧ ಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಲಾಗುತ್ತದೆ. ರೈತನ ತಪಾಸಣೆಗೆ ಕಳುಹಿಸಲು ವ್ಯವಸ್ಥೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.