ಕರ್ನಾಟಕ

karnataka

ಕೊರೊನಾ ಭೀತಿ: ಸಿಎಂ ಪರಿಹಾರ ನಿಧಿಗೆ ಚೆಕ್​ ವಿತರಿಸಿ ಹಸೆಮಣೆ ಏರಿದ ಜೊಡಿ

By

Published : May 13, 2020, 8:45 PM IST

ಲಾಕ್​ಡೌನ್​ ಹಿನ್ನೆಲೆ ಗುಂಡ್ಲುಪೇಟೆ ತಾಲೂಕಿನಲ್ಲಿ ನವಜೋಡಿ ಸರಳ ವಿವಾಹ ಮಾಡಿಕೊಳ್ಳುವ ಮೂಲಕ ಗಮನ ಸೆಳೆಯಿತು.

Newlywed couples
ಸಿಎಂ ಪರಿಹಾರ ನಿಧಿಗೆ ಚೆಕ್​ ವಿತರಿಸಿ ಹಸೆಮಣೆ ಏರಿದ ಜೊಡಿ

ಗುಂಡ್ಲುಪೇಟೆ:ತಾಲೂಕಿನ ಕುಂದಕೆರೆ ಗ್ರಾಮದ ಚೇತನ್ ಮೂರ್ತಿ ಹಾಗೂ ಶ್ರುತಿ ಎಂಬುವರು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 25,000 ರೂ.ಗಳ ಚೆಕ್ ಅನ್ನು ಶಾಸಕ ಸಿ.ಎಸ್.ನಿರಂಜನ ಕುಮಾರ್ ಅವರಿಗೆ ತಲುಪಿಸುವ ಮೂಲಕ ಸರಳ ವಿವಾಹ ಮಾಡಿಕೊಂಡರು.

ಸಿಎಂ ಪರಿಹಾರ ನಿಧಿಗೆ ಚೆಕ್​ ವಿತರಿಸಿ ಹಸೆಮಣೆ ಏರಿದ ಜೊಡಿ

ಚೆಕ್​ ಸ್ವೀಕರಿಸಿ ಮಾತನಾಡಿದ ಶಾಸಕರು, ಇಂತಹ ಸರಳ ವಿವಾಹ ಸಮಾಜಕ್ಕೆ ಅವಶ್ಯಕತೆ ಇದೆ. ಈ ತರಹದ ಸರಳ ಮದುವೆಗಳಿಂದ ಆರ್ಥಿಕ ಸಮಸ್ಯೆಯಿಂದ ಹೊರಬರಬಹುದು ಎಂದರು.

ಲಾಕ್​ಡೌನ್ ಹೇರಿದ್ದರ​ ಹಿನ್ನೆಲೆ ಈ ನವಜೋಡಿ ಸರಳ ವಿವಾಹ ಮಾಡಿಕೊಳ್ಳುವ ಮೂಲಕ ತಾಲೂಕಿನಲ್ಲಿ ಗಮನ ಸೆಳೆಯಿತು.

ABOUT THE AUTHOR

...view details