ಚಾಮರಾಜನಗರ: ಅಕ್ರಮವಾಗಿ ಪೆಟ್ರೋಲ್ ಮಾರುತ್ತಿದ್ದ ಕಿರಾಣಿ ಅಂಗಡಿಯೊಂದು ಬೆಂಕಿ ಅನಾಹುತಕ್ಕೆ ತುತ್ತಾಗಿ ಹೊತ್ತಿ ಉರಿದ ಘಟನೆ ಹನೂರು ತಾಲೂಕಿನ ಗೋಪಿನಾಥಂನಲ್ಲಿ ನಡೆದಿದೆ.
ಗ್ರಾಮದ ಪಳನಿ ಎಂಬಾತ ಮನೆಯ ಮುಂಭಾಗ ಕಿರಾಣಿ ಅಂಗಡಿ ಇಟ್ಟುಕೊಂಡಿದ್ದು, ಅಕ್ರಮವಾಗಿ ಪೆಟ್ರೋಲ್ ಮಾರಾಟ ಮಾಡುತ್ತಿದ್ದರು. ಗುರುವಾರ ಸಂಜೆ ಬೆಂಕಿ ಕಿಡಿಯೊಂದು ಪೆಟ್ರೋಲ್ ಕ್ಯಾನ್ಗಳಿಗೆ ತಗುಲಿ ಅಂಗಡಿ ಹೊತ್ತಿ ಉರಿದಿದೆ.
ಕೂಡಲೇ ಸ್ಥಳೀಯರು ಬೆಂಕಿ ನಂದಿಸಲು ಯಶಸ್ವಿಯಾದರೂ ಸಾವಿರಾರು ರೂ. ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ ಎನ್ನಲಾಗಿದೆ. ಸದ್ಯ ಮಲೆಮಹದೇಶ್ವರ ಬೆಟ್ಟದ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.