ಕರ್ನಾಟಕ

karnataka

By

Published : Oct 1, 2019, 5:03 AM IST

ETV Bharat / state

ಸರ್ಕಲ್​ನಲ್ಲೇ ಆತ್ಮಹತ್ಯೆ ಯತ್ನದ ಹೈಡ್ರಾಮಾ - ವಿಡಿಯೋ

ಮುಖ್ಯ ರಸ್ತೆಯಲ್ಲೇ ವ್ಯಕ್ತಿವೋರ್ವ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ ಘಟನೆ ನಡೆದಿದೆ. ಇದರಿಂದ ಕೆಲಕಾಲ ಸಂಚಾರ ಅಸ್ತವ್ಯಸ್ತವಾಗಿತ್ತು.

ಆತ್ಮಹತ್ಯೆ ಹೈಡ್ರಾಮಾ

ಬೀದರ್: ವ್ಯಕ್ತಿವೋರ್ವ ಕೊರಳಿಗೆ ಬಟ್ಟೆ ಸುತ್ತಿಕೊಂಡು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿ ಹೈಡ್ರಾಮಾ ಮಾಡಿದ್ದರಿಂದ ಸುಮಾರು ಒಂದು ಗಂಟೆಗಳ ಕಾಲ ಸಾರ್ವಜನಿಕರು ಆತಂಕಕ್ಕೊಳಗಾದ ಘಟನೆ ನಡೆದಿದೆ.

ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೈಡ್ರಾಮಾ

ನಗರದ ಬಸವೇಶ್ವರ ವೃತದಲ್ಲಿ ಭಾಲ್ಕಿ ಪಟ್ಟಣದ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್​ನಲ್ಲಿ ಕೆಲಸ ಮಾಡುತ್ತಿರುವ ಬಸವರಾಜ ಅಡೆಪ್ಪ ಎಂಬಾತ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೈಡ್ರಾಮಾ ಮಾಡಿದ ವ್ಯಕ್ತಿ. ನಡುರಸ್ತೆಯಲ್ಲಿಯೇ ನಾನು ಜೀವ ಬಿಡುತ್ತೀನಿ ಎಂದು ರಂಪಾಟ ಆರಂಭಿಸಿದ್ದ. ಇದನ್ನು ಕಂಡ ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದರು. ಸ್ಥಳಕ್ಕೆ ಬಂದ ಮಾರ್ಕೇಟ್ ಪೊಲೀಸ್ ಠಾಣೆ ಸಿಬ್ಬಂದಿ ಎಷ್ಟೇ ಪ್ರಯತ್ನ ಪಟ್ಟರೂ ಸಹ ಬಸವರಾಜ್ ಮಾತ್ರ ಹೈಡ್ರಾಮ ಮುಂದುವರಿಸಿದ್ದ. ಇದರಿಂದಾಗಿ ಕೆಲಕಾಲ ನಯಾಕಮಾನ್, ಗಾಂಧಿಗಂಜ, ಹೈದ್ರಾಬಾದ್ ರೋಡ್​ನಲ್ಲಿ ಸಂಚಾರ ಅಸ್ತವ್ಯಸ್ತವಾಗಿತ್ತು.

ನಂತರ ರಕ್ಷಣೆಗೆ ಮುಂದಾದಾಗ ಬಸವರಾಜ್ ವೃತದ ಮೇಲಿಂದ ಕೆಳಗೆ ಜಿಗಿದು ಬಿದ್ದು ಗಾಯಗೊಂಡಿದ್ದಾನೆ. ತಕ್ಷಣ ಆತನನ್ನು ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ. ಆತ್ಮಹತ್ಯೆ ಯತ್ನಕ್ಕೆ ಕಾರಣ ಏನು ಎಂಬುದರ ಕುರಿತು ಇನ್ನೂ ಮಾಹಿತಿ ಲಭ್ಯವಾಗಿಲ್ಲ. ಈ ಕುರಿತು ಮಾರ್ಕೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details