ಎಲ್ಲೆಂದರಲ್ಲಿ ಸುರಿದಿರುವ ಕಸದ ರಾಶಿ.. ದಟ್ಟವಾಗಿ ಆವರಿಸಿರುವ ಹೊಗೆ.. ಇಂತಹ ದೃಶ್ಯಗಳು ಕಂಡು ಬರುತ್ತಿರುವುದು ಬೀದರ್ ತಾಲೂಕಿನ ಸುಲ್ತಾಪೂರ ಗ್ರಾಮದಲ್ಲಿ.
ನಗರಸಭೆ ಹೊರ ಹಾಕುತ್ತಿರುವ ತ್ಯಾಜ್ಯ ವಿಲೇವಾರಿ ಘಟಕದ ಅವಾಂತರದಿಂದ ಈ ಗ್ರಾಮದ ಯುವಕರಿಗೆ ಕಂಕಣಭಾಗ್ಯವೇ ಇಲ್ಲದಂತಾಗಿದೆ. ತ್ಯಾಜ್ಯಕ್ಕೆ ಬೆಂಕಿ ಹತ್ತಿ ಸದಾ ಗಬ್ಬು ನಾರುವ ಕೆಟ್ಟ ವಾಸನೆ ಇಡೀ ಊರಿಗೆ ಆವರಿಸಿಕೊಳ್ಳುತ್ತೆ. ಹೆಣ್ಣು ಹೆತ್ತವರು ಈ ಗ್ರಾಮಕ್ಕೆ ಕಾಲಿಡುತ್ತಿದ್ದಂತೆ, ಈ ನರಕಕ್ಕೆ ನಮ್ಮ ಮಗಳನ್ನು ಕೊಡುವುದಿಲ್ಲ ಅಂತಾ ವಾಪಸ್ ಹೋಗ್ತಾರಂತೆ. ಹೀಗಾಗಿ ಈ ಗ್ರಾಮದ ಯುವಕರು ಕಂಗಾಲಾಗಿದ್ದಾರೆ.