ಕರ್ನಾಟಕ

karnataka

By

Published : Jul 29, 2020, 10:36 PM IST

ETV Bharat / state

ವಿಶ್ವ ಹುಲಿ ದಿನಾಚರಣೆ: ರಾಯಲ್ ಬಂಗಾಲ‌ ಹುಲಿ ದತ್ತು ಪಡೆದ ಅರಣ್ಯ ಸಚಿವ

ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ ಸಿಂಗ್ ಅವರು, ಈ ವರ್ಷದ ಜುಲೈ 29 ರಿಂದ 2021 ಜುಲೈ 29 ರ ಒಂದು ವರ್ಷದ ಅವಧಿಗೆ ಈ ಹುಲಿಯನ್ನು ದತ್ತು ಪಡೆದಿದ್ದಾರೆ.

ಬಳ್ಳಾರಿ: ವಿಶ್ವ ಹುಲಿ ದಿನಾಚರಣೆ ನಿಮಿತ್ತ ಜಿಲ್ಲೆಯ ಹೊಸಪೇಟೆ ತಾಲೂಕಿನ ಅಟಲ್ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನವನಕ್ಕೆ ಅರಣ್ಯ ಸಚಿವ ಆನಂದ್ ಸಿಂಗ್ ಭೇಟಿ ನೀಡಿ ರಾಯಲ್ ಬಂಗಾಲ ಹುಲಿಯನ್ನು ದತ್ತು ಪಡೆದುಕೊಂಡಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಆನಂದ್‌ ಸಿಂಗ್ ತಮ್ಮ ಮೊಬೈಲ್​ನಲ್ಲೇ ದತ್ತು ಸ್ವೀಕಾರ ಪತ್ರವನ್ನು ಬಿಡುಗಡೆ ಮಾಡಿದ್ದಾರೆ. ಜುಲೈ 29 ರಿಂದ 2021 ಜುಲೈ 29 ರ ಒಂದು ವರ್ಷಗಳ ಅವಧಿಗೆ ಈ ಹುಲಿಯನ್ನು ಅವರು ದತ್ತು ಪಡೆದಿದ್ದಾರೆ.

ABOUT THE AUTHOR

...view details