ಕರ್ನಾಟಕ

karnataka

By

Published : May 11, 2019, 6:35 PM IST

ETV Bharat / state

ಗಾಂಧಿ ಭವನದ ಎದುರಿಗಿರುವ ಕಟ್ಟಡಗಳ ‌ನೆಲಸಮಕ್ಕೆ ಡಿಸಿ ಸೂಚನೆ

ಜಿಲ್ಲಾಧಿಕಾರಿ ಕಚೇರಿ ಆವರಣದ ಸ್ಪಂದನ‌ ಕೇಂದ್ರ ಬಳಿ ನೂತನವಾಗಿ ನಿರ್ಮಿಸುತ್ತಿರುವ ಗಾಂಧಿ ಭವನ ಎದುರಿರುವ ಎರಡು ಕಟ್ಟಡಗಳನ್ನು ಕೂಡಲೇ ನೆಲಸಮಗೊಳಿಸಬೇಕೆಂದು ಬಳ್ಳಾರಿ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.

ಗಾಂಧಿಭವನದ ಎದುರಿಗಿರುವ ಕಟ್ಟಡಗಳ ‌ನೆಲಸಮಕ್ಕೆ ಡಿಸಿ ಸೂಚನೆ!

ಬಳ್ಳಾರಿ: ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದ ಸ್ಪಂದನ‌ ಕೇಂದ್ರದ ಬಳಿ ನೂತನವಾಗಿ ನಿರ್ಮಿಸುತ್ತಿರುವ ಗಾಂಧಿ ಭವನ ಎದುರಿರುವ ಎರಡು ಕಟ್ಟಡಗಳನ್ನು ಕೂಡಲೇ ನೆಲಸಮಗೊಳಿಸಬೇಕೆಂದು ಜಿಲ್ಲಾಧಿಕಾರಿ ಡಾ. ವಿ.ರಾಮಪ್ರಸಾತ್ ಮನೋಹರ ಸೂಚನೆ ನೀಡಿದ್ದಾರೆ.


ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ನಿರ್ಮಾಣ ಹಂತದಲ್ಲಿರುವ ಭೂ ದಾಖಲೆಗಳ ಇಲಾಖೆ ಉಪ ನಿರ್ದೇಶಕರ ಕಟ್ಟಡ, ಸಹಾಯಕ ನಿರ್ದೇಶಕರ ಕಟ್ಟಡ, ಸ್ಪಂದನ ಕಚೇರಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಟ್ಟಡ ಸೇರಿದಂತೆ ಇನ್ನಿತರೆ ಕಟ್ಟಡಗಳ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಅವರು ಮಾತನಾಡಿದರು. ಗಾಂಧಿ ಭವನದೆದುರಿರುವ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಕಚೇರಿ ಹಾಗೂ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯ ಕಟ್ಟಡಗಳನ್ನು ಕೂಡಲೇ ನೆಲಸಮಗೊಳಿಸಿ ಭವನದ ಸೌಂದರ್ಯಕ್ಕೆ ಆದ್ಯತೆ ನೀಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.


ಇನ್ನೂ ಕೆಲ ಕಚೇರಿಗಳಿಗೆ ಕೊಠಡಿಗಳ ಕೊರತೆಯಿದೆ. ಅವುಗಳ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಡಿಪಿಎಆರ್ ರೂಪಿಸಿ ನೀಡಿ, ಅಗತ್ಯ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.

ABOUT THE AUTHOR

...view details