ಕರ್ನಾಟಕ

karnataka

ETV Bharat / state

ಸ್ವಗ್ರಾಮ ತಲುಪಿದ ವೀರ ಯೋಧ ಪ್ರವೀಣ ಪಟ್ಟಣಕುಡೆ ಪಾರ್ಥಿವ ಶರೀರ

ಕಾಶ್ಮೀರದ ಎಲ್ ಒ ಸಿ ಬಳಿ ಗುಂಡೇಟು ತಿಂದು ಗಾಯಗೊಂಡಿದ್ದ ಯೋಧ ಪ್ರವೀಣ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. ಅವರ ಪಾರ್ಥಿವ ಶರೀರ ಮುಂಜಾನೆ ಅವರ ಹುಟ್ಟೂರು ಚಿಕ್ಕೋಡಿ ತಾಲೂಕಿನ ಚಂದೂರ ಗ್ರಾಮಕ್ಕೆ ತಲುಪಿದೆ.

By

Published : Mar 10, 2019, 3:20 PM IST

ಪಾರ್ಥಿವ ಶರೀರ

ಚಿಕ್ಕೋಡಿ : ತಾಲೂಕಿನ ಚಂದೂರ ಗ್ರಾಮದ ಯೋಧ ಪ್ರವೀಣ ಪಟ್ಟಣಕುಡೆ ಅವರ ಪಾರ್ಥಿವ ಶರೀರ ಮುಂಜಾನೆ ಗ್ರಾಮಕ್ಕೆ ತಲುಪಿದೆ.

ಕಾಶ್ಮೀರದ ಎಲ್ ಒ ಸಿ ಬಳಿ ಗುಂಡೇಟು ತಿಂದು ಗಾಯಗೊಂಡಿದ್ದ ಯೋಧ ಪ್ರವೀಣ ಚಿಕಿತ್ಸೆ ಫಲಿಸದೆ ಮಿಲಿಟರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಅವರ ಪಾರ್ಥಿವ ಶರೀರ ಕಂಡು ಗ್ರಾಮಸ್ಥರು ಪ್ರವೀಣ ಅಮರ ರಹೇ ಘೋಷಣೆ ಕೂಗುತ್ತಾ ಗ್ರಾಮದ ಮುಖ್ಯ ಬೀದಿಯಲ್ಲಿ ಪಾರ್ಥಿವ ಶರೀರದ ಮೆರವಣೆಗೆ ಮಾಡಿದರು.

ಸ್ವಗ್ರಾಮ ತಲುಪಿದ ವೀರ ಯೋಧನ ಪಾರ್ಥಿವ ಶರೀರ

ಇನ್ನು ಅಂತ್ಯ ಸಂಸ್ಕಾರಕ್ಕೆ ಜನಸಾಗರವೇ ಹರಿದು ಬರುತ್ತಿದ್ದು, ಚಂದೂರು ಗ್ರಾಮ ಹಾಗೂ ಸುತ್ತ ಮುತ್ತಲಿನ ಹಳ್ಳಿಯ ಜನರು ಶೋಕ ಸಾಗರದಲ್ಲಿ ಮುಳುಗಿದ್ದಾರೆ. ಇಂದು ಸಕಲ ಸರ್ಕಾರಿ ಗೌರವದೊಂದಿದೆ ಅಂತ್ಯ ಸಂಸ್ಕಾರ ನಡೆಯಲಿದೆ.

ಕೌಲಗಿ ಚಿಕ್ಕೋಡಿ ಗ್ರಾಮದ ತುಂಬ ಪ್ರವೀಣ ಅಮರ ರಹೇ ಘೋಷಣೆ ಮೊಳಗಿದೆ.

ABOUT THE AUTHOR

...view details