ಚಿಕ್ಕೋಡಿ: ಕಳೆದ ಎರಡ್ಮೂರು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿಚಿಕ್ಕೋಡಿ ವಿಭಾಗದ ಜನರು ಪ್ರವಾಹದ ಭೀತಿ ಎದುರಿಸುತ್ತಿದ್ದಾರೆ.
ಬೆಳಗಾವಿ ಜಿಲ್ಲೆಯಲ್ಲಿ ಭಾರಿ ಮಳೆ... ಪ್ರವಾಹಕ್ಕೆ ಸಿಲುಕಿದ್ದ ದಂಪತಿ ರಕ್ಷಿಸಿದ ಎಸ್ಡಿಆರ್ಎಫ್ ತಂಡ
ಬೆಳಗಾವಿ ಜಿಲ್ಲೆಯಲ್ಲಿ ಎಕಾಏಕಿ ನದಿ ನೀರು ಹೆಚ್ಚಾದ ಪರಿಣಾಮ ಶಿರಗೂರು ಗ್ರಾಮ ನಡುಗಡ್ಡೆಯಂತಾಗಿದೆ. ಪ್ರವಾಹ ಬಂದು ಮನೆಯಲ್ಲಿ ಸಿಲುಕಿದ್ದ ದಂಪತಿಯನ್ನು ಎಸ್ಡಿಆರ್ಎಫ್ ಸಿಬ್ಬಂದಿ ರಕ್ಷಿಸಿ, ಸುರಕ್ಷಿತ ಸ್ಥಳಕ್ಕೆ ಕರೆತಂದಿದ್ದಾರೆ.
ದಂಪತಿಗಳನ್ನು ರಕ್ಷಿಸಿದ ಎಸ್ ಡಿ ಆರ್ ಎಫ್ ತಂಡ
ಎಕಾಏಕಿ ನದಿ ನೀರು ಹೆಚ್ಚಾಗಿ ರಾಯಬಾಗ ತಾಲೂಕಿನ ಶಿರಗೂರು ಗ್ರಾಮಕ್ಕೆ ನುಗ್ಗಿರುವ ಹಿನ್ನೆಲೆ ಮನೆಯಿಂದ ಹೊರಬರಲು ಸಾಧ್ಯವಾಗದ ಸ್ಥಿತಿಯಲ್ಲಿದ್ದ ದಂಪತಿಯನ್ನು ಎಸ್ ಡಿ ಆರ್ ಎಫ್ ತಂಡದ ಸಿಬ್ಬಂದಿ ರಕ್ಷಿಸಿದ್ದಾರೆ.
ಭಾರಿ ಮಳೆಯಿಂದಾಗಿ ಶಿರಗೂರು ಗ್ರಾಮ ನಡುಗಡ್ಡೆಯಂತಾಗಿದೆ. ಹೀಗಾಗಿ ಮನೆಯಿಂದ ಹೊರಬರಲಾಗದೇ ಸಂಕಷ್ಟಕ್ಕೆ ಸಿಲುಕಿದ್ದ ಮೀರ್ಸಾಬ್ ಮುಲ್ಲಾ ದಂಪತಿಯನ್ನು ರಕ್ಷಿಸಲಾಗಿದೆ.