ಕರ್ನಾಟಕ

karnataka

By

Published : Mar 7, 2021, 8:55 PM IST

ETV Bharat / state

ಸಿಡಿ ಕೇಸ್ ವಾಪಸ್​​ಗೆ ನಿರ್ಧಾರ: ಗೋಕಾಕ​​​ನಲ್ಲಿ ರಮೇಶ​ ಜಾರಕಿಹೊಳಿ ಬೆಂಬಲಿಗರ ಸಂಭ್ರಮಾಚರಣೆ

ಕಳೆದ 3-4 ದಿನಗಳಿಂದ ಬೆಳಗಾವಿ ಹಾಗೂ ಗೋಕಾಕ ಕ್ಷೇತ್ರದಲ್ಲಿ ರಮೇಶ ಜಾರಕಿಹೊಳಿ ಬೆಂಬಲಿಗರು ಸಿಡಿ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಪ್ರತಿಭಟನೆ ನಡೆಸಿದ್ದರು. ಇಂದು ರಮೇಶ​ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನೇಶ​​ ಕಲ್ಲಹಳ್ಳಿ ನೀಡಿದ್ದ ದೂರನ್ನು ವಾಪಸ್ ಪಡೆಯುವುದಾಗಿ ಹೇಳಿದ್ದರಿಂದ ಬೆಂಬಲಿಗರ ಸಂಭ್ರಮಾಚರಣೆ ಮುಗಿಲು ಮಟ್ಟಿದೆ.

Ramesh Zarakiholi supporters celebration at Gokak
ಸಿಡಿ ಕೇಸ್ ವಾಪಸ್​​ಗೆ ನಿರ್ಧಾರ: ಗೋಕಾಕ್​​​ನಲ್ಲಿ ರಮೇಶ್​ ಜಾರಕಿಹೊಳಿ ಬೆಂಬಲಿಗರ ಸಂಭ್ರಮಾಚರಣೆ

ಬೆಳಗಾವಿ: ರಮೇಶ ಜಾರಕಿಹೊಳಿ‌ ಸಿಡಿ ಪ್ರಕರಣ ಸಂಬಂಧ ದೂರು ವಾಪಸ್‌ ಪಡೆಯಲು ನಾಗರಿಕ ಹಕ್ಕು ಸಮಿತಿ ಹೋರಾಟಗಾರ ದಿನೇಶ ಕಲ್ಲಹಳ್ಳಿ ನಿರ್ಧಾರ ಮಾಡಿರುವ ಹಿನ್ನೆಲೆ ಗೋಕಾಕಿನ ರಮೇಶ ಜಾರಕಿಹೊಳಿಯವರ ಗೃಹ ಕಚೇರಿ ಎದುರು ಅಭಿಮಾನಿಗಳು, ಬಿಜೆಪಿ ಮುಖಂಡರು ಸೇರಿ ಸಂಭ್ರಮಾಚರಣೆ ಮಾಡಿದರು.

ಗೋಕಾಕ್​​​ನಲ್ಲಿ ರಮೇಶ್​ ಜಾರಕಿಹೊಳಿ ಬೆಂಬಲಿಗರ ಸಂಭ್ರಮಾಚರಣೆ

ಜಿಲ್ಲೆಯ ಗೋಕಾಕ ನಗರದ ಫಾಲ್ಸ್ ರಸ್ತೆಯಲ್ಲಿರುವ ಗೃಹ ಕಚೇರಿಯಲ್ಲಿ ಮಾಜಿ ಸಚಿವ ರಮೇಶ ಜಾರಕಿಹೊಳಿ‌ ಬೆಂಬಲಿಗರು ಸಂಭ್ರಮಿಸಿ, ರಮೇಶಗೆ ಜೈಕಾರ ಹಾಕಿದರು. ಈ ವೇಳೆ ಸತ್ಯಮೇವ ಜಯತೆ ಎಂದು ರಮೇಶ ಜಾರಕಿಹೊಳಿ‌ ಅಭಿಮಾನಿಗಳು ಘೋಷಣೆ ಕೂಗಿದರು.

ಓದಿ:ಜಾರಕಿಹೊಳಿ ಸಿಡಿ ಪ್ರಕರಣ: ದೂರು ವಾಪಸ್ ಪಡೆಯಲಿರುವ ದಿನೇಶ್ ಕಲ್ಲಹಳ್ಳಿ

ಕಳೆದ 3-4 ದಿನಗಳಿಂದ ಬೆಳಗಾವಿ ಹಾಗೂ ಗೋಕಾಕ ಕ್ಷೇತ್ರದಲ್ಲಿ ರಮೇಶ​ ಜಾರಕಿಹೊಳಿ ಬೆಂಬಲಿಗರು ಸಿಡಿ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಪ್ರತಿಭಟನೆ ನಡೆಸಿದ್ದರು. ಇಂದು ರಮೇಶ​ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನೇಶ್​​ ಕಲ್ಲಹಳ್ಳಿ ನೀಡಿದ್ದ ದೂರನ್ನು ವಾಪಸ್ ಪಡೆಯುವುದಾಗಿ ಹೇಳಿದ್ದರಿಂದ ಬೆಂಬಲಿಗರ ಸಂಭ್ರಮಾಚರಣೆ ಮುಗಿಲು ಮಟ್ಟಿದೆ.

ABOUT THE AUTHOR

...view details