ಕರ್ನಾಟಕ

karnataka

ETV Bharat / state

ಟ್ಯಾಂಕರ್​​ ನೀರಿನಲ್ಲೂ ಗೋಲ್​ಮಾಲ್​ ಆರೋಪ: ಸ್ಥಳೀಯರಿಂದ ಅಧಿಕಾರಿಗಳಿಗೆ ತರಾಟೆ

ಬೋರ್​ ವೆಲ್‍ನಲ್ಲಿ ನೀರು ಬರುತ್ತಿದ್ದರೂ ಟ್ಯಾಂಕರ್ ಮೂಲಕ ನೀರು ಪೂರೈಸುತ್ತಿದ್ದಾರೆ ಎಂದು ಅಧಿಕಾರಿಗಳಿಗೆ ಸ್ಥಳೀಯರು ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.

By

Published : May 11, 2019, 10:05 PM IST

ಸ್ಥಳೀಯರಿಂದ ಅಧಿಕಾರಿಗಳಿಗೆ ತರಾಟೆ

ಬೆಳಗಾವಿ: ಬೋರ್​ವೆಲ್‍ನಲ್ಲಿ ನೀರು ಬರುತ್ತಿದ್ದರೂ ಟ್ಯಾಂಕರ್ ಮೂಲಕ ನೀರು ಪೂರೈಸುತ್ತಿರುವ ಎಂ.ಕೆ.ಹುಬ್ಬಳ್ಳಿಯ ಪಟ್ಟಣ ಪಂಚಾಯಿತಿ ಅಧಿಕಾರಿಗಳನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಸ್ಥಳೀಯರಿಂದ ಅಧಿಕಾರಿಗಳಿಗೆ ತರಾಟೆ

ಸರ್ಕಾರದ ಹಣ ಲೂಟಿ ಮಾಡಲು ಅಧಿಕಾರಿಗಳು ಟ್ಯಾಂಕರ್ ಮೂಲಕ ನೀರು ಪೂರೈಸುತ್ತಿದ್ದಾರೆ. ಬೋರ್​ವೆಲ್‍ನಲ್ಲಿ ನೀರು ಬರುತ್ತಿದ್ದರೂ ಕಳೆದ ಹಲವು ದಿನಗಳಿಂದ ನೀರು ಬಿಡುತ್ತಿಲ್ಲ. ಈಗ ಹಣ ಲೂಟಿ ಮಾಡಲು ಟ್ಯಾಂಕರ್ ಬಳಕೆ ಮಾಡುತ್ತಿದ್ದೀರಿ ಎಂದು ಸ್ಥಳೀಯರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ನಮಗೆ ಟ್ಯಾಂಕರ್ ನೀರು ಬೇಡ. ತಕ್ಷಣವೇ ಬೋರ್​ವೆಲ್​ ಮೂಲಕವೇ ನೀರು ಸರಬರಾಜು ಮಾಡುವಂತೆ ಅಧಿಕಾರಿಗಳಿಗೆ ಸ್ಥಳೀಯರು ಆಗ್ರಹಿಸಿದ್ದಾರೆ.

ABOUT THE AUTHOR

...view details