ಕರ್ನಾಟಕ

karnataka

By

Published : Oct 25, 2020, 3:15 PM IST

ETV Bharat / state

'ಸುರೇಶ್ ಅಂಗಡಿ ಬದುಕುಳಿದಿದ್ರೆ 2-3 ತಿಂಗಳಲ್ಲಿ ದೊಡ್ಡ ಹುದ್ದೆ ಸಿಗ್ತಿತ್ತು'

ಕೇಂದ್ರ ಸಚಿವ ಸುರೇಶ್ ಅಂಗಡಿ ಬದುಕುಳಿದಿದ್ರೆ, ಮುಂದಿನ ಎರಡ್ಮೂರು ತಿಂಗಳಲ್ಲಿ ಅವರಿಗೆ ದೊಡ್ಡ ಹುದ್ದೆ ಸಿಗ್ತಿತ್ತು ಅಂತಾ ಸಚಿವ ರಮೇಶ್ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ.

jarakiholi
ಸಚಿವ ರಮೇಶ್ ಜಾರಕಿಹೊಳಿ

ಬೆಳಗಾವಿ :ಕೇಂದ್ರ ಸಚಿವರಾಗಿದ್ದ ಸುರೇಶ ಅಂಗಡಿಯವರು ಬದುಕುಳಿದಿದ್ರೆ ಎರಡ್ಮೂರು ತಿಂಗಳಲ್ಲಿ ದೊಡ್ಡ ಹುದ್ದೆಗೇರುತ್ತಿದ್ದರು ಎಂದು ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.

ಗೋಕಾಕ್‌ ನಗರದಲ್ಲಿ ನಡೆದ ಬಿಜೆಪಿ ನೂತನ ಪದಾಧಿಕಾರಿಗಳ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಸುರೇಶ್ ಅಂಗಡಿಯವರು ದೊಡ್ಡ ನಾಯಕರಾಗಿದ್ದರು. ಅವರು ಬದುಕುಳಿದಿದ್ರೆ ದೊಡ್ಡ ಹುದ್ದೆ ಸಿಗುತ್ತಿತ್ತು. ದುರ್ದೈವ ಅವರು ನಮ್ಮನ್ನಗಲಿದರು. ಸುರೇಶ್ ಅಂಗಡಿ ಒಳ್ಳೆಯ ನಾಯಕ. ಒಳ್ಳೆಯವರನ್ನು ಆ ದೇವರು ಬೇಗ ಕರೆದುಕೊಳ್ಳುತ್ತಾನೆ. ಪಕ್ಷದಲ್ಲಿ‌ ಅವರಿಗೆ ಉತ್ತಮ ಭವಿಷ್ಯವಿತ್ತು ಎಂದು ಹೇಳುವ ಮೂಲಕ ಸುರೇಶ್ ಅಂಗಡಿ ಮುಂದಿನ ದಿನಗಳಲ್ಲಿ ರಾಜ್ಯದ ಸಿಎಂ ಆಗುತ್ತಿದ್ದರು ಎಂದು ಪರೋಕ್ಷವಾಗಿ ಹೇಳಿದರು.

ಸುರೇಶ್ ಅಂಗಡಿಯವರು ಬದುಕುಳಿದಿದ್ರೆ ಎರಡ್ಮೂರು ತಿಂಗಳಲ್ಲಿ ದೊಡ್ಡ ಹುದ್ದೆ ಸಿಗ್ತಿತ್ತು.. ರಮೇಶ್ ಜಾರಕಿಹೊಳಿ

ಇತ್ತೀಚೆಗಷ್ಟೇ ಸುರೇಶ್ ಅಂಗಡಿ ಮಾವ ಲಿಂಗರಾಜ್ ಪಾಟೀಲ್, ಸುರೇಶ್ ಅಂಗಡಿ ಬದುಕಿ ಉಳಿದಿದ್ದರೆ ಮುಂದಿನ ದಿನಗಳಲ್ಲಿ ಅವರು ಸಿಎಂ ಆಗುತ್ತಿದ್ದರು ಎಂಬ ಹೇಳಿಕೆ ನೀಡಿದ್ದರು.

For All Latest Updates

ABOUT THE AUTHOR

...view details