ಕರ್ನಾಟಕ

karnataka

By

Published : Apr 10, 2020, 4:56 PM IST

ETV Bharat / state

ಮನೆಯಲ್ಲಿ ಇರ್ತೀರಾ ಇಲ್ಲ ಜೈಲಲ್ಲಿರ್ತೀರಾ, ನೀವೇ ಡಿಸೈಡ್ ಮಾಡಿ.. ಡಿಸಿಪಿ ಖಡಕ್ ವಾರ್ನಿಂಗ್

ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿವೆ. ಜನ ಎಚ್ಚೆತ್ತುಕೊಳ್ಳಬೇಕು. ನಗರದ ಕ್ಯಾಂಪ್, ಹಿರೇಬಾಗೇವಾಡಿ ಹಾಗೂ ಬೆಳಗುಂದಿ ಪ್ರದೇಶವನ್ನ ಸಂಪೂರ್ಣ ಲಾಕ್‌ಡೌನ್ ಮಾಡಲಾಗಿದೆ. ಜನರು ಕೊರೊನಾದ ಗಂಭೀರತೆ ಅರಿತು ಮನೆಯಲ್ಲಿಯೇ ಇರಬೇಕು. ಸುಮ್ಮನೇ ಹೊರಗೆ ಬಂದ್ರೆ ಕಠಿಣ ಕ್ರಮಕೈಗೊಳ್ಳಲಾಗುತ್ತೆ.

ಡಿಸಿಪಿ ಖಡಕ್ ವಾರ್ನಿಂಗ್
ಡಿಸಿಪಿ ಖಡಕ್ ವಾರ್ನಿಂಗ್

ಬೆಳಗಾವಿ :ತರಕಾರಿ, ಔಷಧಿ ಖರೀದಿ ನೆಪವೊಡ್ಡಿ ಅನಗತ್ಯ ರಸ್ತೆಗಿಳಿದು ಓಡಾಟ ನಡೆಸುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದೆಂದು ಡಿಸಿಪಿ ಸೀಮಾ ಲಾಟ್ಕರ್ ಖಡಕ್ ವಾರ್ನಿಂಗ್ ನೀಡಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ 10 ಜನರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಈ ಹಿನ್ನೆಲೆ ಲಾಕ್​​ಡೌನ್ ಮತ್ತಷ್ಟು ಬಿಗಿಗೊಳಿಸಲಾಗಿದೆ. ಆದರೆ, ಜನ ಎಷ್ಟೇ ಹೇಳಿದ್ರೂ ಲಾಕ್​​​ಡೌನ್ ಆದೇಶವನ್ನು ಪದೇಪದೇ ಉಲ್ಲಂಘಿಸುತ್ತಿದ್ದಾರೆ.

ಡಿಸಿಪಿ ಖಡಕ್ ವಾರ್ನಿಂಗ್..

ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿವೆ. ಜನ ಎಚ್ಚೆತ್ತುಕೊಳ್ಳಬೇಕು. ನಗರದ ಕ್ಯಾಂಪ್, ಹಿರೇಬಾಗೇವಾಡಿ ಹಾಗೂ ಬೆಳಗುಂದಿ ಪ್ರದೇಶವನ್ನ ಸಂಪೂರ್ಣ ಲಾಕ್‌ಡೌನ್ ಮಾಡಲಾಗಿದೆ. ಜನರು ಕೊರೊನಾದ ಗಂಭೀರತೆ ಅರಿತು ಮನೆಯಲ್ಲಿಯೇ ಇರಬೇಕು. ಸುಮ್ಮನೇ ಹೊರಗೆ ಬಂದ್ರೆ ಕಠಿಣ ಕ್ರಮಕೈಗೊಳ್ಳಲಾಗುತ್ತೆ.

ಮನೆಯಲ್ಲಿ ಇರ್ತೀರಾ, ಇಲ್ಲವೇ ಜೈಲಲ್ಲಿ ಇರ್ತೀರಾ, ನೀವೇ ಡಿಸೈಡ್ ಮಾಡಿ ಎಂದು ಎಚ್ಚರಿಕೆ ನೀಡಿದರು. ನಕಲಿ ಪಾಸ್ ಇಟ್ಟುಕೊಂಡು ಓಡಾಡುತ್ತಿರುವ ಬಗ್ಗೆಯೂ ಗಮನಕ್ಕೆ ಬಂದಿದೆ. ಈಗಾಗಲೇ ನಕಲಿ ಪಾಸ್ ಹೊಂದಿದ ಇಬ್ಬರ ವಿರುದ್ಧ ಕೇಸ್ ದಾಖಲಿಸಲಾಗಿದೆ‌ ಎಂದರು.

ABOUT THE AUTHOR

...view details