ಕರ್ನಾಟಕ

karnataka

By

Published : Aug 3, 2019, 6:02 AM IST

ETV Bharat / state

ಬೆಳಗಾವಿಯಲ್ಲಿ ನಾಲ್ವರು ಸರಗಳ್ಳರ ಬಂಧನ... 184 ಗ್ರಾಂ ಚಿನ್ನಾಭರಣ ವಶಕ್ಕೆ

ಬೆಳಗಾವಿ ನಗರ ಹಾಗೂ ಜಿಲ್ಲೆಯ ವಿವಿಧೆಡೆ ನಡೆದ ಸರಗಳ್ಳತನ ಪ್ರಕರಣವನ್ನು ಭೇದಿಸಿರುವ ಕುಂದಾನಗರಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಸರಗಳ್ಳತನ ಮಾಡುತ್ತಿದ್ದ ನಾಲ್ಕು ಜನರ ಬಂಧನ

ಬೆಳಗಾವಿ:ನಗರ ಹಾಗೂ ಜಿಲ್ಲೆಯ ವಿವಿಧೆಡೆಗಳಲ್ಲಿ ನಡೆಯುತ್ತಿದ್ದ ಸರಗಳ್ಳತನ ಪ್ರಕರಣವನ್ನು ಭೇದಿಸಿರುವ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿ, ಅವರಿಂದ ಮೂರು ದ್ವಿಚಕ್ರ ವಾಹನ ಹಾಗೂ 8 ಲಕ್ಷದ 99 ಸಾವಿರ ಮೌಲ್ಯದ 184 ಗ್ರಾಂ. ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಉದ್ಯಮಬಾಗ ಪ್ರದೇಶದ ಲಕ್ಷೀ ನಗರ ಎಕೆಪಿ ಫೌಂಡ್ರಿ ರಸ್ತೆಯ ನಿವಾಸಿಗಳಾದ ದೀಪಕ್​ ಸುರೇಶ್​ ಅಗಸಿಮನಿ (21), ದೇವರಾಜ ಯಲ್ಲಪ್ಪ ಪೂಜಾರಿ (21), ನಾಗರಾಜ ಚಿದಾನಂದ ತಳವಾರ (20) ಹಾಗೂ ಅಸ್ಲಂ ಮೌಲಾಸಾಬ ಶೇರೆಗಾರ (20) ಬಂಧಿತರು.

ಮೇ 11 ರಂದು ನಗರದ ದೇಶಪಾಂಡೆ ಚಾಳದ ವಿಮಲಾ ಸೀತಾರಾಮ ಶಿಂಧೆ ಎಂಬುವರು ಸಂತೋಷ - ನಿರ್ಮಲ ಟಾಕೀಸ್ ಬಳಿ ಹೋಗುತ್ತಿದ್ದರು. ಈ ವೇಳೆ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ವ್ಯಕ್ತಿಗಳು ಅಜ್ಜಿ ಅಜ್ಜಿ ಎಂದು ಕರೆದಿದ್ದಾರೆ. ಹಿಂದಿರುಗಿ ನೋಡುತ್ತಿದ್ದಂತೆ ಮತ್ತೊಂದು ಬೈಕ್‌ನಲ್ಲಿ ಬಂದ ಇಬ್ಬರು ಕೊರಳಲ್ಲಿದ್ದ 32 ಸಾವಿರ ರೂ. ಮೌಲ್ಯದ 12 ಗ್ರಾಂ. ತೂಕದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದರು.

ಈ ಕುರಿತು ನಗರದ ಖಡೇಬಜಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಖಡೇಬಜಾರ್​​​ ಹಾಗೂ ಉದ್ಯಮಬಾಗ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿ ಕಂಬಿ ಹಿಂದೆ ತಳ್ಳಿದ್ದಾರೆ.

For All Latest Updates

ABOUT THE AUTHOR

...view details