ಕರ್ನಾಟಕ

karnataka

ಅನ್ನ ಹಾಕಿದ ಮನೆಗೆ ಕನ್ನ: ಆರೋಪಿ ಪೊಲೀಸರ ಈಗ ಅತಿಥಿ

By

Published : Dec 27, 2019, 12:51 PM IST

ಮನೆ ಮಾಲೀಕರ ಚಿನ್ನ ಕಳ್ಳತನ ಮಾಡಿದ ಆರೋಪಿಯನ್ನು ಬಂಧಿಸುವಲ್ಲಿ ವಿದ್ಯಾರಣ್ಯಪುರ ಪೊಲೀಸರು ಯಶಸ್ವಿಯಾಗಿದ್ದಾರೆ.

Worker  Stole The Home Owner's Gold
ಅನ್ನ ಹಾಕಿದ ಧಣಿಗೆ ಕನ್ನ ಹಾಕಿದ ಕಿರಾತಕಿ...!

ಬೆಂಗಳೂರು: ಮನೆ ಮಾಲೀಕರ ಚಿನ್ನ ಕಳ್ಳತನ ಮಾಡಿದ್ದ ಆರೋಪದ ಮೇಲೆ ಮನೆ ಕೆಲಸದಾಕೆಯನ್ನು ಬಂಧಿಸಿರುವ ಘಟನೆ ವಿದ್ಯಾರಣ್ಯಪುರ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಸವಿತಾ ಬಂಧಿತ ಆರೋಪಿಯಾಗಿದ್ದು, ಈಕೆ ವಿದ್ಯಾರಣ್ಯಪುರ ಪೊಲೀಸ್ ಠಾಣಾ ಸರಹದ್ದಿನ ನಿವಾಸಿಯಾದ ಶಿಖಾ ದೇವರಾಜ್ ಎಂಬುವರ ಮನೆಯಲ್ಲಿ ಕಳೆದ ಕೆಲ ವರ್ಷಗಳಿಂದ ಸವಿತಾ ಕೆಲಸ ಮಾಡುತ್ತಿದ್ದಳಂತೆ.

ಇತ್ತೀಚೆಗೆ ಶಿಖಾ ಹಾಗೂ ಕುಟುಂಬಸ್ಥರು‌ ಮನೆಯಲ್ಲಿ ಯಾರು ಇಲ್ಲದ ವೇಳೆ ಮನೆಯ ಕಬೋರ್ಡ್​ದಲ್ಲಿದ್ದ ಸುಮಾರು 45 ಗ್ರಾಂ ತೂಕದ ಚಿನ್ನಾಭರಣಗಳನ್ನು ಮಾಲೀಕರಿಗೆ ತಿಳಿಯದಂತೆ ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದಳು ಎಂದು ಆರೋಪಿಸಲಾಗಿದೆ. ಈ ವಿಚಾರ ಮನೆ ಮಾಲೀಕರಿಗೆ ತಿಳಿದು ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರು ಆಧರಿಸಿ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ABOUT THE AUTHOR

...view details