ಕರ್ನಾಟಕ

karnataka

By

Published : Feb 28, 2020, 6:42 AM IST

ETV Bharat / state

ಅಧಿಸೂಚನೆಯಂತೆ ಮಹದಾಯಿ ನದಿ ನೀರಿನ ಸದ್ಬಳಕೆ‌: ಸಚಿವ ಜಾರಕಿಹೊಳಿ

ಮಹದಾಯಿ ನದಿ ನೀರು ಹಂಚಿಕೆ‌ ಅಧಿಸೂಚನೆಯಂತೆ ನಮ್ಮ ಪಾಲಿನ ನೀರನ್ನು ಕಾಲಮಿತಿಯೊಳಗೆ ಸದ್ಬಳಕೆ‌ ಮಾಡಿಕೊಳ್ಳುತ್ತೇವೆ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ.

Ramesh jarakiholi
ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ

ಬೆಂಗಳೂರು:ಮಹದಾಯಿ ನದಿ ನೀರು ಹಂಚಿಕೆ‌ ಅಧಿಸೂಚನೆಯಂತೆ ನಮ್ಮ ಪಾಲಿನ 13.42 ಟಿಎಂಸಿ ನೀರನ್ನು ಕಾಲಮಿತಿಯೊಳಗೆ ಸದ್ಬಳಕೆ‌ ಮಾಡಿಕೊಳ್ಳುತ್ತೇವೆ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ.

ಮಹದಾಯಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕವು ತುಂಬಾ ನಿರೀಕ್ಷೆ ಇಟ್ಟುಕೊಂಡು ಕಾಯುತ್ತಿದ್ದ ಅಧಿಸೂಚನೆಯನ್ನು ಕೇಂದ್ರ ಸರ್ಕಾರ ಹೊರಡಿಸಿದೆ. ಬುಧವಾರ ನಾವು ಕೇಂದ್ರದ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್​​​ರನ್ನು ಭೇಟಿ ಮಾಡಿ‌ ಕೂಡಲೇ ಅಧಿಸೂಚನೆ ಹೊರಡಿಸಲು ಮನವಿ ಮಾಡಿದ್ದೆವು.‌ ನಮ್ಮ ಪುರಸ್ಕರಿಸಿದ‌ ಕೇಂದ್ರ ಸರ್ಕಾರಕ್ಕೆ ನಾನು ಅಭಿನಂದನೆ‌ ಸಲ್ಲಿಸುತ್ತೇನೆ. ಮತ್ತು ನಮ್ಮ ಪಾಲಿನ ನೀರನ್ನು ಕಾಲಮಿತಿಯೊಳಗೆ ಸದ್ಬಳಕೆ‌ ಮಾಡಿಕೊಳ್ಳುತ್ತೇವೆ ಎಂದಿದ್ದಾರೆ.

ABOUT THE AUTHOR

...view details