ಕರ್ನಾಟಕ

karnataka

By

Published : Sep 28, 2021, 1:46 PM IST

Updated : Sep 28, 2021, 3:30 PM IST

ETV Bharat / state

Live Video: ಕುಳ್ಳ ವೆಂಕಟೇಶ್ ಭೀಕರ ಹತ್ಯೆ.. ಸಿಸಿಟಿವಿಯಲ್ಲಿ ‌ಸೆರೆಯಾದ ದೃಶ್ಯ

ಆರು ಜನ ದುಷ್ಕರ್ಮಿಗಳು ಆಟೋ ಮತ್ತು ದ್ವಿಚಕ್ರ ವಾಹನದಲ್ಲಿ ಬಂದು ವೆಂಕಟೇಶ್ ಬೈಕ್​​ಗೆ ಡಿಕ್ಕಿ ಹೊಡೆದಿದ್ದಾರೆ. ಬಳಿಕ ಆತ ನೆಲಕ್ಕೆ ಬಿದ್ದ ನಂತರ ದುಷ್ಕರ್ಮಿಗಳು ಶಸ್ತ್ರಾಸ್ತಗಳಿಂದ ಅಲ್ಲೇ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಇದು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ರೌಡಿ ಶೀಟರ್​ ಕುಳ್ಳ ವೆಂಕಟೇಶ್ ಭೀಕರ ಹತ್ಯೆ
ರೌಡಿ ಶೀಟರ್​ ಕುಳ್ಳ ವೆಂಕಟೇಶ್ ಭೀಕರ ಹತ್ಯೆ

ಕೆ.ಆರ್.ಪುರ (ಬೆಂಗಳೂರು): ಕಳೆದ ಮೂರು ದಿನಗಳ ಹಿಂದೆ ಬೆಂಗಳೂರು ಹೊರವಲಯದ ಆವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಕುಳ್ಳ ವೆಂಕಟೇಶ್ ಹತ್ಯೆಯ ಭೀಕರ ಸಿಸಿಟಿವಿ ದೃಶ್ಯ ಲಭ್ಯವಾಗಿದೆ.

ಸೆಪ್ಟೆಂಬರ್ 25ರಂದು ಕುಳ್ಳ ವೆಂಕಟೇಶ್ ರಾಮಮೂರ್ತಿನಗರದ ಮನೆಯಿಂದ ದ್ವಿಚಕ್ರ ವಾಹನದಲ್ಲಿ ಜಮೀನು ನೋಡಲು ಹೋಗುತ್ತಿದ್ದ. ಆಗ ಆರು ಜನ ದುಷ್ಕರ್ಮಿಗಳು ಆಟೋ ಮತ್ತು ದ್ವಿಚಕ್ರ ವಾಹನದಲ್ಲಿ ಬಂದು ವೆಂಕಟೇಶ್ ಬೈಕ್​​ಗೆ ಡಿಕ್ಕಿ ಹೊಡೆದಿದ್ದಾರೆ. ಹೀಗಾಗಿ ಆತ ನೆಲಕ್ಕೆ ಬಿದ್ದಿದ್ದಾನೆ, ಈ ವೇಳೆ ದುಷ್ಕರ್ಮಿಗಳು ಶಸ್ತ್ರಾಸ್ತಗಳಿಂದ ಅಲ್ಲೇ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಈ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.

ರೌಡಿ ಶೀಟರ್​ ಕುಳ್ಳ ವೆಂಕಟೇಶ್ ಭೀಕರ ಹತ್ಯೆ

ಇದನ್ನೂ ಓದಿ:ಬೆಂಗಳೂರಲ್ಲಿ ಹಾಡಹಗಲೇ ಝಳಪಿಸಿದ ಮಾರಕಾಸ್ತ್ರ.. ವ್ಯಕ್ತಿಯ ಬರ್ಬರ ಹತ್ಯೆ

ಪ್ರಮುಖ ಆರೋಪಿ ಅನಿಲ್ ಸೇರಿದಂತೆ ನಾಲ್ವರನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಜಮೀನು ವಿಷಯಕ್ಕೆ ಕುಳ್ಳ ವೆಂಕಟೇಶ್​​‌ನನ್ನು ಅನಿಲ್ ಮತ್ತು ಅವರ ಸ್ನೇಹಿತರು ಸೇರಿಕೊಂಡು ಹತ್ಯೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

Last Updated : Sep 28, 2021, 3:30 PM IST

For All Latest Updates

ABOUT THE AUTHOR

...view details