ಕರ್ನಾಟಕ

karnataka

By

Published : Sep 11, 2019, 6:09 PM IST

ETV Bharat / state

ನ್ಯಾಷನಲ್ ಕಾಲೇಜು ಮೈದಾನದಲ್ಲಿ ಭಾರಿ ಜನಸ್ತೋಮ: ಡಿಕೆಶಿ ಪರ ಹೋರಾಟ

ಡಿ.ಕೆ. ಶಿವಕುಮಾರ್ ಬಂಧನ ಖಂಡಿಸಿ ನಗರದಲ್ಲಿ ಇಂದು ನಡೆದ ಹೋರಾಟ ಯಶಸ್ಸು ಕಂಡಿದೆ. ನಿರೀಕ್ಷೆಗೂ ಮೀರಿದ ಜನ ಬೆಂಬಲ ದೊರೆತಿದೆ.

ಡಿಕೆಶಿ ಪರ ಹೋರಾಟಕ್ಕೆ ಆರಂಭಿಕ ಯಶಸ್ಸು

ಬೆಂಗಳೂರು:ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ಬಂಧಿಸಿರುವ ಜಾರಿ ನಿರ್ದೇಶನಾಲಯದ ಕ್ರಮ ಖಂಡಿಸಿ ನಗರದಲ್ಲಿ ನಡೆದ ಬೃಹತ್ ಪ್ರತಿಭಟನಾ ಮೆರವಣಿಗೆಗೆ ಭಾರಿ ಬೆಂಬಲ ದೊರೆತಿದೆ.

ನ್ಯಾಷನಲ್ ಕಾಲೇಜು ಆವರಣ ಸಂಪೂರ್ಣ ಡಿಕೆಶಿ ಅಭಿಮಾನಿಗಳಿಂದ ತುಂಬಿ ತುಳುಕಿತ್ತು. ನಿಗದಿಯಂತೆ ಬೆಳಗ್ಗೆ 10 ಗಂಟೆಗೆ ಆಗಮಿಸಲು ಆರಂಭಿಸಿದ ಅಭಿಮಾನಿಗಳು ಮಧ್ಯಾಹ್ನ 12 ಗಂಟೆ ಹೊತ್ತಿಗೆ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದರು.

ಡಿಕೆಶಿ ಪರ ಹೋರಾಟಕ್ಕೆ ಆರಂಭಿಕ ಯಶಸ್ಸು

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಸಚಿವರಾದ ಚೆಲುವರಾಯಸ್ವಾಮಿ, ರಾಮಲಿಂಗಾ ರೆಡ್ಡಿ, ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಈ ಮೆರವಣಿಗೆಯ ಆರಂಭಿಕ ಭಾಗದಲ್ಲಿ ಪಾಲ್ಗೊಂಡು ಗಮನ ಸೆಳೆದರು. ಜನಸ್ತೋಮವನ್ನು ಉದ್ದೇಶಿಸಿ ತಮ್ಮ ಭಾಷಣವನ್ನು ಮಾಡಿದ ನಾಯಕರು, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಡಿಕೆಶಿ ಪರ ಹೋರಾಟಕ್ಕೆ ಆರಂಭಿಕ ಯಶಸ್ಸು

ಕಾಲೇಜು ಆವರಣದಲ್ಲಿ ಡಿಕೆಶಿ ಎಂಬ ಹೆಸರಿನ ಟೋಪಿ ಹಾಗೂ ಅವರ ಭಾವಚಿತ್ರದ ಮುಖವಾಡ ಧರಿಸಿದ ಜನರು ಗಮನಸೆಳೆದರು. ಮೆರವಣಿಗೆಯಾದ್ಯಂತ ಡಿ.ಕೆ. ಶಿವಕುಮಾರ್ ಅವರ ಜಯಘೋಷಗಳನ್ನು ಮೊಳಗಿಸಿದ್ರು. ಈ ವೇಳೆ ಬೃಹತ್ ಬಾವುಟವನ್ನು ಪ್ರದರ್ಶಿಸಿ ಅಭಿಮಾನಿಗಳು ಅಭಿಮಾನ ವ್ಯಕ್ತಪಡಿಸಿದರು.

ಕೆಲವರ ಅನುಪಸ್ಥಿತಿ:

ಮಾಜಿ ಸಿಎಂ ಹೆಚ್. ಡಿ. ಕುಮಾರಸ್ವಾಮಿ, ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಸೇರಿದಂತೆ ಹಲವು ನಾಯಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿರಲಿಲ್ಲ. ಕರವೇ ನಾರಾಯಣ ಗೌಡ ಕೆಲ ಸಮಯ ಪ್ರತಿಭಟನೆ ವೇಳೆ ಕಾಣಿಸಿಕೊಂಡರು.

ABOUT THE AUTHOR

...view details