ಬೆಂಗಳೂರು: ಸಿಟಿ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಬೆದರಿಕೆ ಪತ್ರ ಬರೆದಿರುವ ಪ್ರಕರಣದ ತನಿಖೆ ಚುರುಕುಗೊಂಡಿದೆ.
ಬಲಗೈ ಬರವಣಿಗೆ ಹೊಂದಿರುವ ವ್ಯಕ್ತಿ, ಎಡಗೈಯಿಂದ ಬರೆದ ಬೆದರಿಕೆ ಪತ್ರ!
ಕೊಲೆ, ಡಕಾಯಿತಿ, ಬೆದರಿಕೆ, ಹತ್ಯೆಗೆ ಯತ್ನ ಪ್ರಕರಣದ ಎಲ್ಲ ಆರೋಪಿಗಳನ್ನು ಬಿಡುಗಡೆ ಮಾಡಬೇಕು. ನಿಮಗೆ ಹಣ ಬೇಕೆ. ನಿಮಗೆ ಏನು ಬೇಕು ಕೇಳಿ. ಕೇಸ್ ವಿರುದ್ಧ ಹೋದರೆ ನಿಮ್ಮ ಕಾರ್ಗೆ ಬಾಂಬ್ ಇಟ್ಟು ನಿಮ್ಮನ್ನು ಬ್ಲಾಸ್ಟ್ ಮಾಡುತ್ತೇವೆ ಎಂದು ಮೊಹಮ್ಮದ್ ಜೈಷ್ ಇ ಉಗ್ರ ಸಂಘಟನೆ ಹೆಸರು ಉಲ್ಲೇಖಿಸಿ ಸಿಟಿ ಸಿವಿಲ್ ಕೋರ್ಟ್ ನ್ಯಾಯಾಧೀಶರಿಗೆ ಪತ್ರ ಬರೆಯಲಾಗಿದೆ.
![ಬಲಗೈ ಬರವಣಿಗೆ ಹೊಂದಿರುವ ವ್ಯಕ್ತಿ, ಎಡಗೈಯಿಂದ ಬರೆದ ಬೆದರಿಕೆ ಪತ್ರ! letter-to-a-judge-in-the-name-of-millitant-by-right-hand-man-written-in-left-hand](https://etvbharatimages.akamaized.net/etvbharat/prod-images/768-512-9242045-thumbnail-3x2-bng.jpg)
ಬಲಗೈ ಬರವಣಿಗೆ ಹೊಂದಿರುವ ವ್ಯಕ್ತಿ, ತನ್ನ ಎಡಗೈಯಿಂದ ಬೆದರಿಕೆ ಪತ್ರ..ತನಿಖೆಯಲ್ಲಿ ಬಯಲು
ಹಾಗೆ ಅನಾಮಧೇಯ ವ್ಯಕ್ತಿಯ ಪತ್ರ ವೈರಲ್ ಆಗಿದ್ದು, ಬಲಗೈ ಬರವಣಿಗೆ ಹೊಂದಿರುವ ವ್ಯಕ್ತಿ ತನ್ನ ಎಡಗೈಯಿಂದ ಬರೆದಿರುವುದನ್ನು ಹ್ಯಾಂಡ್ ರೈಟರ್ ಎಕ್ಸ್ಪರ್ಟ್ಗಳು ಪತ್ತೆ ಹಚ್ಚಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಡ್ರಗ್ಸ್ ಕೇಸ್ನ ಎಲ್ಲಾ ಆಪಾದಿತರಿಗೆ ಜಾಮೀನು ನೀಡಿ: ಉಗ್ರ ಸಂಘಟನೆ ಹೆಸರಲ್ಲಿ ಜಡ್ಜ್ಗೆ ಪತ್ರ