ಕರ್ನಾಟಕ

karnataka

ETV Bharat / state

ರೆಸಾರ್ಟ್​ನಲ್ಲಿ ರಾತ್ರಿ ಕಳೆದ ಜೆಡಿಎಸ್ ಶಾಸಕರು... ಇಂದು ಸಿಎಂ ಭೇಟಿ

ಇಂದು ಕುಮಾರಸ್ವಾಮಿ ಶಾಸಕರನ್ನು ಭೇಟಿಯಾಗುವ ಸಾಧ್ಯತೆ ಇದೆ. ಅವರ ಮಾತಿನಂತೆ ಮುಂದೆ ಏನು ಮಾಡಬೇಕು ಅನ್ನೋ ನಿರ್ಧಾರ ಮಾಡಲಿದ್ದಾರೆ.

By

Published : Jul 9, 2019, 8:34 AM IST

ಜೆಡಿಎಸ್ ಶಾಸಕರು

ಬೆಂಗಳೂರು:ಜೆಡಿಎಸ್ ಶಾಸಕರ ರೆಸಾರ್ಟ್ ವಾಸ್ತವ್ಯ ದೇವನಹಳ್ಳಿ ತಾಲೂಕಿನ ಪ್ರೆಸ್ಟೀಜ್ ಗಾಲ್ಫ್​ ಶೈರ್ ರೆಸಾರ್ಟ್​ನಲ್ಲಿ ಮುಂದುವರೆಯಲಿದ್ದು, ಶಾಸಕರು ರೆಸಾರ್ಟ್​ನಲ್ಲಿ ಈಗಾಗಲೇ ಒಂದು ರಾತ್ರಿ ಕಳೆದಿದ್ದಾರೆ.

ರಾತ್ರಿ ರೆಸಾರ್ಟ್​ನತ್ತ ಬರಬೇಕಿದ್ದ ಸಿಎಂ ಇನ್ನೂ ಇತ್ತ ಸುಳಿದಿಲ್ಲ, ಇಂದು ಕುಮಾರಸ್ವಾಮಿ ಅವರು ಶಾಸಕರನ್ನು ಭೇಟಿಯಾಗುವ ಸಾಧ್ಯತೆಯಿದೆ. ಅವರ ಮಾತಿನಂತೆ ಮುಂದೆ ಏನು ಮಾಡಬೇಕು ಅನ್ನೋ ನಿರ್ಧಾರವನ್ನು ಶಾಸಕರು ಕೈಗೊಳ್ಳಲಿದ್ದಾರೆ.

ಸದ್ಯ ಶಾಸಕರಿಗೆ ಬ್ರೇಕ್ ಫಾಸ್ಟ್ ರೆಸಾರ್ಟ್​ನಲ್ಲೇ ಸಿದ್ಧವಾಗಿದೆ. ರೆಸಾರ್ಟ್​ನ 9 ವಿಲ್ಲಾಗಳಲ್ಲಿ ಎಂಎಲ್​ಎಗಳು ವಾಸ್ತವ್ಯ ಹೂಡಿದ್ದು, ಎಲ್ಲಾ ರೀತಿಯ ಹೈಫೈ ಸೌಕರ್ಯ ಸಿಗುತ್ತಿದೆ.

ABOUT THE AUTHOR

...view details