ಬೆಂಗಳೂರು:ಕ್ಯಾನ್ಸರ್ ಅಂದರೆ ಜನ ಇಂದಿಗೂ ಗಾಬರಿಯಾಗುತ್ತಾರೆ. ಕ್ಯಾನ್ಸರ್ ಮೊದಲ ಹಂತದಲ್ಲಿ ಇರುವಾಗಲೇ ಕಂಡುಕೊಂಡರೆ, ಅದರಿಂದ ಪಾರಾಗುವುದು ಸುಲಭ. ಆದರೆ, ಈಗಂತೂ ನಾನಾ ಬಗೆಯ ಕ್ಯಾನ್ಸರ್ಗಳು ಜನರನ್ನು ಕಾಡುತ್ತಿವೆ. ಕ್ಯಾನ್ಸರ್ ಪತ್ತೆಗಾಗಿ ಹಲವು ವಿಧಾನಗಳು ಇವೆ. ಆದರೆ, ಮತ್ತಷ್ಟು ನಿಖರತೆಗಾಗಿ ಈಗ ಹೊಸ ಬಗೆಯ ತಂತ್ರಜ್ಞಾನವನ್ನು ಇಂದು ಪರಿಚಯಿಸಲಾಯಿತು.
ಅಂದಹಾಗೆ ಇಂದು ಖಾಸಗಿ ಹೋಟೆಲ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕ್ಯಾನ್ಸರ್ ರೋಗಗಕ್ಕೆ ಸುಲಭವಾಗಿ ಚಿಕಿತ್ಸೆ ಒದಗಿಸಲು ಮುಂದಾಗಿದ್ದು, ಈ ನಿಟ್ಟಿನಲ್ಲಿ ಸರಳ ಡಿಜಿಟಲ್ ಪೆಥಾಲಜಿ ಮೂಲಕ ಪರಿಹಾರ ನೀಡಲು ಮುಂದಾಗಿದೆ ಅಂತ ಹೆಚ್ಸಿಜಿ ಆಸ್ಪತ್ರೆಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಬಿ.ಎಸ್.ಅಜಯ್ ಕುಮಾರ್ ತಿಳಿಸಿದರು.