ಕರ್ನಾಟಕ

karnataka

ETV Bharat / state

ಕ್ಯಾನ್ಸರ್​​​ ಪತ್ತೆಗೆ ನೂತನ ವ್ಯವಸ್ಥೆ,ಅತ್ಯಾಧುನಿಕ ತಂತ್ರಜ್ಞಾನ ಪರಿಚಯಿಸಿದ ಹೆಚ್​ಸಿಜಿ ಆಸ್ಪತ್ರೆ

ಮೊದಲ ಹಂತದಲ್ಲಿ ಕ್ಯಾನ್ಸರ್​ ಕಾಣಿಸಿಕೊಂಡರೆ ಅದರಿಂದ ಸುಲಭವಾಗಿ ಹೊರಬರಬಹುದು ಎನ್ನುತ್ತಾರೆ ವೈದ್ಯರು. ಹೇಗೆ ಅನ್ನೋದನ್ನು ಅವರ ಬಾಯಲ್ಲಿಯೇ ಕೇಳಿ ನೋಡೋಣ.

By

Published : Apr 26, 2019, 11:37 PM IST

ಹೆಚ್​ಸಿಜಿ ಆಸ್ಪತ್ರೆಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ ಬಿ ಎಸ್ ಅಜಯ್ ಕುಮಾರ್

ಬೆಂಗಳೂರು:ಕ್ಯಾನ್ಸರ್​ ಅಂದರೆ ಜನ ಇಂದಿಗೂ ಗಾಬರಿಯಾಗುತ್ತಾರೆ. ಕ್ಯಾನ್ಸರ್​ ಮೊದಲ ಹಂತದಲ್ಲಿ ಇರುವಾಗಲೇ ಕಂಡುಕೊಂಡರೆ, ಅದರಿಂದ ಪಾರಾಗುವುದು ಸುಲಭ. ಆದರೆ, ಈಗಂತೂ ನಾನಾ ಬಗೆಯ ಕ್ಯಾನ್ಸರ್​ಗಳು ಜನರನ್ನು ಕಾಡುತ್ತಿವೆ. ಕ್ಯಾನ್ಸರ್​ ಪತ್ತೆಗಾಗಿ ಹಲವು ವಿಧಾನಗಳು ಇವೆ. ಆದರೆ, ಮತ್ತಷ್ಟು ನಿಖರತೆಗಾಗಿ ಈಗ ಹೊಸ ಬಗೆಯ ತಂತ್ರಜ್ಞಾನವನ್ನು ಇಂದು ಪರಿಚಯಿಸಲಾಯಿತು.‌

ಅಂದಹಾಗೆ ಇಂದು ಖಾಸಗಿ ಹೋಟೆಲ್​ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕ್ಯಾನ್ಸರ್​​ ರೋಗಗಕ್ಕೆ ಸುಲಭವಾಗಿ ಚಿಕಿತ್ಸೆ ಒದಗಿಸಲು ಮುಂದಾಗಿದ್ದು, ಈ ನಿಟ್ಟಿನಲ್ಲಿ ಸರಳ ಡಿಜಿಟಲ್​ ಪೆಥಾಲಜಿ ಮೂಲಕ ಪರಿಹಾರ ನೀಡಲು ಮುಂದಾಗಿದೆ ಅಂತ ಹೆಚ್​ಸಿಜಿ ಆಸ್ಪತ್ರೆಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಬಿ.ಎಸ್.ಅಜಯ್ ಕುಮಾರ್ ತಿಳಿಸಿದರು.

ಹೆಚ್​ಸಿಜಿ ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಬಿ.ಎಸ್ ಅಜಯ್ ಕುಮಾರ್

ಡಿಜಿಟಲ್ ಸೇವೆಗಳನ್ನು ಪರಿಚಯಿಸುವುದರೊಂದಿಗೆ ಹೆಚ್​ಸಿಜಿ ಆಸ್ಪತ್ರೆ ಕ್ಯಾನ್ಸರ್​ ಚಿಕಿತ್ಸೆಯಲ್ಲಿ ಕ್ರಾಂತಿ ಉಂಟುಮಾಡುತ್ತ, ಮತ್ತಷ್ಟು ಮುಂದುವರೆದಿದೆ. ಇದರೊಂದಿಗೆ ರೋಗಿಗಳಿಗೆ ಉತ್ತಮ ಫಲಿತಾಂಶಗಳನ್ನು ನೀಡುವತ್ತ ಗಮನ ಕೇಂದ್ರೀಕರಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ನಿಖರತೆ, ವೇಗ ಕಾರ್ಯಕ್ಷಮತೆ ಮತ್ತು ಸುಲಭವಾಗಿ ಬಳಸುವ ಕಾರಣಗಳಿಂದ ವೈದ್ಯರು ಮತ್ತು ರೋಗಿಗಳಿಗೂ ವೈದ್ಯಕೀಯ ಲಾಭಗಳನ್ನು ಪೂರೈಸುವ ಸಾಮರ್ಥ್ಯ ಹೊಂದಿದೆ ಅಂತಾರೆ ತಜ್ಞರು. ‌ಸದ್ಯ ಹೆಚ್​ಸಿಜಿ ತನ್ನೆಲ್ಲಾ ಕೇಂದ್ರಗಳಲ್ಲೂ ಈ ಹೊಸ ಸೇವೆಯನ್ನ ಆರಂಭಿಸಲಿದ್ದು, ಕ್ಯಾನ್ಸರ್ ರೋಗಿಗಳಿಗೆ ಇದು ವರದಾನವಾಗಲಿದೆ.

ABOUT THE AUTHOR

...view details