ಕರ್ನಾಟಕ

karnataka

ETV Bharat / state

ರೈತರ ಸಮಸ್ಯೆ ಇತ್ಯರ್ಥಪಡಿಸುವಂತೆ ಒತ್ತಾಯ: ರೈತರಿಂದ ಬಹೃತ್ ರ‍್ಯಾಲಿ

ರೈತರ ಸಮಸ್ಯೆ ಇತ್ಯರ್ಥ ಪಡಿಸುವಂತೆ ಒತ್ತಾಯಿಸಿ ಅಖಂಡ ಕರ್ನಾಟಕ ರೈತ ಸಂಘದ ನೇತೃತತ್ವದಲ್ಲಿ ರೈತರು ಬೆಂಗಳೂರಿನಲ್ಲಿ ರೈಲ್ವೆ ನಿಲ್ದಾಣದಿಂದ ಫ್ರೀಡಂಪಾರ್ಕ್ ವರೆಗೆ ಬಹೃತ್ ರ‍್ಯಾಲಿ ನಡೆಸಿದ್ದಾರೆ.

By

Published : Jul 21, 2019, 5:03 PM IST

ರೈತರಿಂದ ಬಹೃತ್ ರ‍್ಯಾಲಿ

ಬೆಂಗಳೂರು:ರಾಜ್ಯದ ರೈತರ ಸಮಸ್ಯೆಗಳನ್ನು ಇತ್ಯರ್ಥಗೊಳಿಸುವಂತೆ ಒತ್ತಾಯಿಸಿ ಅಖಂಡ ಕರ್ನಾಟಕ ರೈತ ಸಂಘದಿಂದ ಇಂದು ರೈಲ್ವೆ ನಿಲ್ದಾಣದಿಂದ ಫ್ರೀಡಂ ಪಾರ್ಕ್ ವರೆಗೆ ಬೃಹತ್ರ‍್ಯಾಲಿನಡೆಸಲಾಯ್ತು.

ರೈತರಿಂದ ಬಹೃತ್ ರ‍್ಯಾಲಿ

‌ಸಾಲಮನ್ನಾ ವಿಷಯದಲ್ಲಿ ಚಾಲ್ತಿ ಸಾಲಗಾರರ ಸಾಲಮನ್ನಾ ಜಾರಿ ಮಾಡಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬರ ಪರಿಹಾರ ಹಾಗೂ ಬೆಳೆ ವಿಮೆ ಹಣವನ್ನು ರೈತರ ಖಾತೆಗೆ ಜಮಾ ಮಾಡಬೇಕು. ಹಳ್ಳಿ ಕೆರೆಗಳ ಹೂಳು ಎತ್ತುವ ಕಾರ್ಯಕ್ರಮ ಜಾರಿಗೊಳಿಸಬೇಕು. ಕಬ್ಬು ಬೆಳೆದ ರೈತರಿಗೆ ಬಾಕಿ ಹಣ ಕೊಡುವುದು, ಕೇಂದ್ರ ಸರ್ಕಾರ ಈ ಕೂಡಲೇ ನದಿಗಳ ಜೋಡಣೆ, ರೈತರ ಕೃಷಿ ಪಂಪ್ ಸೆಟ್​ಗಳಿಗೆ ಹಗಲು ಎಂಟು ಗಂಟೆ ನಿರಂತರ ವಿದ್ಯುತ್ ಕೊಡಬೇಕು. ಬಗರ್ ಹುಕುಂ ಸಾಗುವಳಿದಾರರಿಗೆ ಖಾತೆ‌ ಮಾಡತಕ್ಕದ್ದು, ಗುತ್ತಿಗೆ ಆಧಾರಿತ ನೌಕರರನ್ನು ಖಾಯಂ ಮಾಡಬೇಕೆಂದು ಪ್ರತಿಭಟನಾ ನಿರತರು ಒತ್ತಾಯಿಸಿದರು.

ABOUT THE AUTHOR

...view details