ಕರ್ನಾಟಕ

karnataka

By

Published : Nov 9, 2020, 12:00 PM IST

Updated : Nov 9, 2020, 12:09 PM IST

ETV Bharat / state

ಡಬಲ್ ಇಂಜಿನ್ ಸರ್ಕಾರದಿಂದ ರಾಜ್ಯದ ಜನತೆಗೆ ಡಬಲ್ ಶಾಕ್ : ಸುರ್ಜೇವಾಲಾ

ಉಪಚುನಾವಣೆ ಮತದಾನ ಮುಗಿದ ಬೆನ್ನಲ್ಲೇ ವಿದ್ಯುತ್ ದರ ಏರಿಕೆ ಮಾಡಿದ್ದ ರಾಜ್ಯ ಸರ್ಕಾರದ ನಿಲುವಿಗೆ ಕಾಂಗ್ರೆಸ್ ಖಂಡನೆ ವ್ಯಕ್ತಪಡಿಸಿತ್ತು. ಇದೀಗ ಸರ್ಕಾರ ನೀರಿನ ದರವನ್ನೂ ಹೆಚ್ಚಿಸ್ತಿರೋದಕ್ಕೆ ಈ ಟ್ವೀಟ್ ಮೂಲಕ ಸುರ್ಜೇವಾಲಾ ಕಿಡಿ ಕಾರಿದ್ದಾರೆ..

Surjewala
ಸುರ್ಜೇವಾಲಾ

ಬೆಂಗಳೂರು :ವಿದ್ಯುತ್ ದರ ಏರಿಕೆ ಮಾಡಿ ಜನರಿಗೆ ಹೊರೆ ನೀಡಿದ್ದ ಕರ್ನಾಟಕ ಬಿಜೆಪಿ ಸರ್ಕಾರ ಇದೀಗ ನೀರಿನ ಶುಲ್ಕ ಕೂಡ ಹೆಚ್ಚಿಸಲು ಮುಂದಾಗಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸಿಂಗ್ ಸುರ್ಜೇವಾಲಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಉಪಚುನಾವಣೆ ಮುಗಿದ ಬೆನ್ನಲ್ಲೇ ವಿದ್ಯುತ್ ದರವನ್ನು ಹೆಚ್ಚಿಸುವ ಮೂಲಕ ಬಿಜೆಪಿಯ 'ಡಬಲ್ ಇಂಜಿನ್' ಸರ್ಕಾರವು ಕರ್ನಾಟಕದ ಜನತೆಗೆ ಶಾಕ್ ನೀಡಿತ್ತು. ಈಗ ನೀರಿನ ಶುಲ್ಕವನ್ನೂ ಹೆಚ್ಚಿಸುವ ಮೂಲಕ 'ಡಬಲ್ ಶಾಕ್‌' ಕೊಡಲು ಮುಂದಾಗಿದೆ. ಈ ನಿರ್ದಯಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರವು, ಜನರ ಜೇಬಿನಿಂದ ಪ್ರತಿ ಪೈಸೆಯನ್ನೂ ಲೂಟಿ ಮಾಡಲು ಪಣ ತೊಟ್ಟು ನಿಂತಿದೆ ಎಂದು ದೂರಿದ್ದಾರೆ.

ಇದನ್ನೂ ಓದಿ:ಜಲಮಂಡಳಿಯ ನಷ್ಟ ಸರಿದೂಗಿಸಲು ಸರ್ಕಾರದ ಮೊರೆ: ಸರ್ಕಾರ ಹೆಚ್ಚಿಸುತ್ತಾ ನೀರಿನ ದರ!?

ಉಪಚುನಾವಣೆ ಮತದಾನ ಮುಗಿದ ಬೆನ್ನಲ್ಲೇ ವಿದ್ಯುತ್ ದರ ಏರಿಕೆ ಮಾಡಿದ್ದ ರಾಜ್ಯ ಸರ್ಕಾರದ ನಿಲುವಿಗೆ ಕಾಂಗ್ರೆಸ್ ಖಂಡನೆ ವ್ಯಕ್ತಪಡಿಸಿತ್ತು. ಇದೀಗ ಸರ್ಕಾರ ನೀರಿನ ದರವನ್ನೂ ಹೆಚ್ಚಿಸ್ತಿರೋದಕ್ಕೆ ಈ ಟ್ವೀಟ್ ಮೂಲಕ ಸುರ್ಜೇವಾಲಾ ಕಿಡಿ ಕಾರಿದ್ದಾರೆ.

Last Updated : Nov 9, 2020, 12:09 PM IST

ABOUT THE AUTHOR

...view details