ಕರ್ನಾಟಕ

karnataka

ಲಾಕ್​ಡೌನ್​ನಲ್ಲಿ ನಿರ್ಗತಿಕರ ಹಸಿವು ನೀಗಿಸುತ್ತಿದ್ದಾರೆ ನಟ ಮಹೇಂದ್ರ ಮುನೋತ್

By

Published : Apr 27, 2020, 10:54 AM IST

ನಟ-ನಿರ್ಮಾಪಕ ಮಹೇಂದ್ರ ಮುನೋತ್ ಅವರು ಲಾಕ್​ಡೌನ್​ ಹಿನ್ನೆಲೆ, ಕಳೆದ ಮಾರ್ಚ್​ 26 ರಿಂದ ಏಪ್ರಿಲ್ 25ರ ವರೆಗೆ 25,000 ಜನರಿಗೆ ಊಟದ ವ್ಯವಸ್ಥೆ, ಆಹಾರ ಸಾಮಗ್ರಿಗಳನ್ನು ಸರಬರಾಜು ಮಾಡಿದ್ದಾರೆ.

Actor-producer Mahendra Munoth is working on filling the stomachs of the hungry
ಹಸಿದವರ ಹೊಟ್ಟೆ ತುಂಬಿಸುವ ಕೆಲಸ ಮಾಡ್ತಿದ್ದಾರೆ ನಟ ಮಹೇಂದ್ರ ಮುನೋತ್

ಬೆಂಗಳೂರು: ಲಾಕ್​ಡೌನ್​ ಹಿನ್ನೆಲೆ, ನಟ-ನಿರ್ಮಾಪಕ ಮಹೇಂದ್ರ ಮುನೋತ್ ಸಾವಿರಾರು ಮಂದಿಯ ಹಸಿವನ್ನು ನೀಗಿಸುವ ಕೆಲಸ ಮಾಡುತ್ತಿದ್ದಾರೆ.

ಹಸಿದವರ ಹೊಟ್ಟೆ ತುಂಬಿಸುವ ಕೆಲಸ ಮಾಡ್ತಿದ್ದಾರೆ ನಟ-ನಿರ್ಮಾಪಕ ಮಹೇಂದ್ರ ಮುನೋತ್

‘ಜಿತೋ’ ಸಂಸ್ಥೆ ಜೊತೆ ಸೇರಿಕೊಂಡು ಕಳೆದ ಮಾರ್ಚ್​ 26 ರಿಂದ ಏಪ್ರಿಲ್ 25ರ ವರೆಗೆ 25,000 ಜನರಿಗೆ ಊಟದ ವ್ಯವಸ್ಥೆ, ಆಹಾರ ಸಾಮಗ್ರಿಗಳ ಸರಬರಾಜು ಮಾಡಿದ್ದಾರೆ. ಪೊಲೀಸರಿಗೆ, ವೈದ್ಯರಿಗೆ, ಬಿಬಿಎಂಪಿ ಕೆಲಸಗಾರರಿಗೆ ಸಹಾಯ ಹಸ್ತ ನೀಡುವುದರ ಜೊತೆಗೆ ಸಾವಿರಾರು ಮಾಸ್ಕ್ ಹಾಗೂ ಸ್ಯಾನಿಟೈಸರ್ ಬಾಟಲಿಗಳನ್ನ ಹಂಚಿದ್ದಾರೆ.

ಹಸಿದವರ ಹೊಟ್ಟೆ ತುಂಬಿಸುವ ಕೆಲಸ ಮಾಡ್ತಿದ್ದಾರೆ ನಟ ಮಹೇಂದ್ರ ಮುನೋತ್

ಅಲ್ಲದೇ, 58 ಕ್ವಿಂಟಾಲ್ ಮೇವನ್ನ ಬೆಂಗಳೂರು ಹಾಗೂ ಇತರೆ ಪ್ರದೇಶಗಳಲ್ಲಿರುವ ಗೋವುಗಳಿಗೆ ನೀಡಿದ್ದಾರೆ. ಮಹೇಂದ್ರ ಮುನೋತ್ ಕನ್ನಡದಲ್ಲಿ ಅರಿವು, ಮನೆ ತುಂಬಾ ಬರಿ ಜಂಬ, ಆಟೋ, ಪುಟಾಣಿ ಪವರ್, ಕಿಲಾಡಿಗಳು ಸಿನಿಮಾಗಳಲ್ಲಿ ಅಭಿನಯಿಸಿ, ಅದರಲ್ಲಿ ಎರಡು ಸಿನಿಮಾ ನಿರ್ಮಾಣ ಸಹ ಮಾಡಿದ್ದಾರೆ.

ABOUT THE AUTHOR

...view details