ಬೆಂಗಳೂರು: ಲಾಕ್ಡೌನ್ ಹಿನ್ನೆಲೆ, ನಟ-ನಿರ್ಮಾಪಕ ಮಹೇಂದ್ರ ಮುನೋತ್ ಸಾವಿರಾರು ಮಂದಿಯ ಹಸಿವನ್ನು ನೀಗಿಸುವ ಕೆಲಸ ಮಾಡುತ್ತಿದ್ದಾರೆ.
ಲಾಕ್ಡೌನ್ನಲ್ಲಿ ನಿರ್ಗತಿಕರ ಹಸಿವು ನೀಗಿಸುತ್ತಿದ್ದಾರೆ ನಟ ಮಹೇಂದ್ರ ಮುನೋತ್
ನಟ-ನಿರ್ಮಾಪಕ ಮಹೇಂದ್ರ ಮುನೋತ್ ಅವರು ಲಾಕ್ಡೌನ್ ಹಿನ್ನೆಲೆ, ಕಳೆದ ಮಾರ್ಚ್ 26 ರಿಂದ ಏಪ್ರಿಲ್ 25ರ ವರೆಗೆ 25,000 ಜನರಿಗೆ ಊಟದ ವ್ಯವಸ್ಥೆ, ಆಹಾರ ಸಾಮಗ್ರಿಗಳನ್ನು ಸರಬರಾಜು ಮಾಡಿದ್ದಾರೆ.
‘ಜಿತೋ’ ಸಂಸ್ಥೆ ಜೊತೆ ಸೇರಿಕೊಂಡು ಕಳೆದ ಮಾರ್ಚ್ 26 ರಿಂದ ಏಪ್ರಿಲ್ 25ರ ವರೆಗೆ 25,000 ಜನರಿಗೆ ಊಟದ ವ್ಯವಸ್ಥೆ, ಆಹಾರ ಸಾಮಗ್ರಿಗಳ ಸರಬರಾಜು ಮಾಡಿದ್ದಾರೆ. ಪೊಲೀಸರಿಗೆ, ವೈದ್ಯರಿಗೆ, ಬಿಬಿಎಂಪಿ ಕೆಲಸಗಾರರಿಗೆ ಸಹಾಯ ಹಸ್ತ ನೀಡುವುದರ ಜೊತೆಗೆ ಸಾವಿರಾರು ಮಾಸ್ಕ್ ಹಾಗೂ ಸ್ಯಾನಿಟೈಸರ್ ಬಾಟಲಿಗಳನ್ನ ಹಂಚಿದ್ದಾರೆ.
ಅಲ್ಲದೇ, 58 ಕ್ವಿಂಟಾಲ್ ಮೇವನ್ನ ಬೆಂಗಳೂರು ಹಾಗೂ ಇತರೆ ಪ್ರದೇಶಗಳಲ್ಲಿರುವ ಗೋವುಗಳಿಗೆ ನೀಡಿದ್ದಾರೆ. ಮಹೇಂದ್ರ ಮುನೋತ್ ಕನ್ನಡದಲ್ಲಿ ಅರಿವು, ಮನೆ ತುಂಬಾ ಬರಿ ಜಂಬ, ಆಟೋ, ಪುಟಾಣಿ ಪವರ್, ಕಿಲಾಡಿಗಳು ಸಿನಿಮಾಗಳಲ್ಲಿ ಅಭಿನಯಿಸಿ, ಅದರಲ್ಲಿ ಎರಡು ಸಿನಿಮಾ ನಿರ್ಮಾಣ ಸಹ ಮಾಡಿದ್ದಾರೆ.