ಬೆಂಗಳೂರು:ಸಂಜೆ ವೇಳೆಗೆ ನಗರಾದ್ಯಂತ ಸಾಧಾರಣ ಮಳೆ ಸುರಿದು ರಾಜಧಾನಿಯನ್ನು ಮತ್ತಷ್ಟು ತಂಪಾಗಿಸಿತು. ಬಕ್ರೀದ್ ಹಿನ್ನೆಲೆ ರಜೆಯಲ್ಲಿದ್ದ ಸಾರ್ವಜನಿಕರಿಗೆ ಮಳೆಯಿಂದ ಹೆಚ್ಚಿನ ಸಮಸ್ಯೆಯೇನೂ ಆಗಿಲ್ಲ. ನಗರದ ಟ್ರಾಫಿಕ್ ಕೂಡಾ ಸಾಮಾನ್ಯವಾಗಿತ್ತು. ಯಾವುದೇ ದೂರುಗಳೂ ದಾಖಲಾಗಿಲ್ಲ ಎಂದು ಬಿಬಿಎಂಪಿ ಕಂಟ್ರೋಲ್ ರೂಂ ಮಾಹಿತಿ ನೀಡಿದೆ.
ಸಂಜೆ ವೇಳೆ ಬೆಂಗಳೂರಲ್ಲಿ ಸಾಧಾರಣ ಮಳೆ
ಸಂಜೆ ವೇಳೆಗೆ ನಗರಾದ್ಯಂತ ಸಾಧಾರಣ ಮಳೆ ಸುರಿದು ರಾಜಧಾನಿ ಬೆಂಗಳೂರನ್ನು ಮತ್ತಷ್ಟು ತಂಪಾಗಿಸಿತು.
ಸಾಧಾರಣ ಮಳೆ
ಇಂದು ಇಡೀ ದಿನ ತಂಪಿನ ವಾತಾವರಣ ನಗರದಲ್ಲಿತ್ತು. ಸಂಜೆ ವೇಳೆಗೆ ಮಳೆ ಸುರಿದಿದ್ದು, ಯಶವಂತಪುರ, ಮತ್ತಿಕೆರೆ, ಮೆಜೆಸ್ಟಿಕ್, ಶೇಷಾದ್ರಿಪುರಂ, ಕಾರ್ಪೋರೇಷನ್ ಸರ್ಕಲ್, ಜಯನಗರ, ಹನುಂತನಗರ ಸೇರಿದಂತೆ ನಗರದ ಹಲವೆಡೆ ಹದಿನೈದು ನಿಮಿಷಗಳ ಕಾಲ ಮಳೆಯಾಯಿತು.
ಮಳೆ ಮುನ್ಸೂಚನೆ ಹಿನ್ನೆಲೆ ಹೆಚ್ಚುವರಿ ಬಿಬಿಎಂಪಿ ಸಿಬ್ಬಂದಿ ರಜೆಗಳನ್ನು ಆಯುಕ್ತರು ಕಡಿತಗೊಳಿಸುವುದಾಗಿ ತಿಳಿಸಿದ್ದರು. ಆದರೂ ಇಂದು ಬಹುತೇಕ ಸಿಬ್ಬಂದಿ ಪಾಲಿಕೆ ಕಚೇರಿಗಳಿಗೆ ಹಾಜರಾಗದೆ ಗೈರಾಗಿದ್ದರು.