ಕರ್ನಾಟಕ

karnataka

ETV Bharat / state

ಬೆಂಗಳೂರಲ್ಲಿ ಮತ್ತೆ ಸೌಂಡ್​ ಮಾಡಿದ ರಿವಾಲ್ವಾರ್​​: ರೌಡಿ ಶೀಟರ್ಸ್​ ಕಾಲಿಗೆ ಗುಂಡೇಟು

ರೌಡಿಶೀಟರ್​ಗಳ ಬಂಧನಕ್ಕೆ ತೆರಳಿದ್ದ ವೇಳೆ ಆತ್ಮರಕ್ಷಣೆಗಾಗಿ ಪೊಲೀಸರು ರೌಡಿಶೀಟರ್​ಗಳ ಮೇಲೆ ಗುಂಡು ಹಾರಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

By

Published : Jun 28, 2019, 9:53 AM IST

Updated : Jun 28, 2019, 11:15 AM IST

ಸಿಲಿಕಾನ್​ ಸಿಟಿಯಲ್ಲಿ ಮತ್ತೆ ಸೌಂಡ್​ ಮಾಡಿದ ಖಾಕಿ ರಿವಲ್ವಾರು

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಪೊಲೀಸರ ಮೇಲೆ ಹಲ್ಲೆ‌ ಮಾಡಲು ಮುಂದಾಗಿದ್ದ ರೌಡಿಗಳ ಮೇಲೆ ಪೊಲೀಸರು ಫೈರಿಂಗ್​ ಮಾಡುವ ಮೂಲಕ ಆರೋಪಿಗಳನ್ನ ಬಗ್ಗು ಬಡಿಯುತ್ತಿದ್ದಾರೆ. ಇದೀಗ ಕೆ.ಜಿ ಹಳ್ಳಿ ಪೊಲೀಸರು ಇಬ್ಬರು ರೌಡಿಶೀಟರ್​ಗಳ ಕಾಲಿಗೆ ಗುಂಡು ಹಾರಿಸಿದ್ದಾರೆ.

ಸಿಲಿಕಾನ್​ ಸಿಟಿಯಲ್ಲಿ ರೌಡಿ ಶೀಟರ್ಸ್​ಗೆ ಪೊಲೀಸರ ಗುಂಡೇಟು

ಕೆ.ಜಿ ಹಳ್ಳಿಯ ಫಯಾಜ್ ಅಲಿಯಾಸ್ ಪಂಚು ಮತ್ತು ವಾಸೀಂ ಅಲಿಯಾಸ್ ಕುಚ್ಚಮಟ್ಟಿ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ. ಈ ಇಬ್ಬರು ಆರೋಪಿಗಳು ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಕೆ.ಜಿ ಹಳ್ಳಿ ರೌಡಿಶೀಟರ್ ಸಲೀಂ ಎಂಬಾತನನ್ನ ಕೊಲೆ ಮಾಡಿದ್ರು. ಹೀಗಾಗಿ ಇವ್ರ ಪತ್ತೆಗೆ ಡಿಸಿಪಿ ರಾಹುಲ್ ನೇತೃತ್ವದಲ್ಲಿ ಬಾಣಸಾವಡಿ ಉಪ ವಿಭಾಗದ ಎಸಿಪಿ ಹೆಚ್ ಎಂ ಮಹದೇವಪ್ಪ, ಹೆಣ್ಣೂರು ಠಾಣೆ ಇನ್ಸ್​ಪೆಕ್ಟರ್ ಕುಲಕರ್ಣಿ ಕೆ.ಜಿ ಠಾಣೆ ಇನ್​ಸ್ಪೆಕ್ಟರ್​ ಪ್ರದೀಪ್ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು.

ಗುರುವಾರ ರಾತ್ರಿ ಆರೋಪಿಗಳು ಹೆಣ್ಣೂರು ಬಂಡೆ ಸಮೀಪದ ಅರ್ಕಾವತಿ ಲೇಔಟ್ ಬಳಿ ಇರುವ ಮಾಹಿತಿ ಮೇರೆಗೆ ಪೊಲೀಸರು ಬಂಧನಕ್ಕೆ ತೆರಳಿದ್ರು. ಈ ವೇಳೆ ವಾಸೀಂ ಮತ್ತು ಫಯಾಜ್ ಪೊಲೀಸರ ಮೇಲೆಯೇ ಡ್ರ್ಯಾಗರ್​​ನಿಂದ ಹಲ್ಲೆ ಮಾಡಲು ಮುಂದಾಗಿದ್ದರು. ಈ ವೇಳೆ ಆತ್ಮರಕ್ಷಣೆಗೆ ಪೊಲೀಸ್ ಇನ್ಸ್​ಪೆಕ್ಟರ್​ ಕುಲಕರ್ಣಿ ಅವರು ವಾಸೀಂ ಕಾಲಿಗೆ ಹಾಗೂ ಫಯಾಜ್​ ಕಾಲಿಗೆ ಇನ್ಸ್​ಪೆಕ್ಟರ್​ ಪ್ರದೀಪ್ ಗುಂಡು ಹಾರಿಸಿ ಬಂಧಿಸಿದ್ದಾರೆ. ಮತ್ತೋರ್ವ ಆರೋಪಿ ವಾಸೀಂ ವಿರುದ್ಧ ಕೇರಳ ಸೇರಿದಂತೆ ನಗರದ ಹಲವು ಠಾಣೆಗಳಲ್ಲಿ ದರೋಡೆ, ಕೊಲೆ ಯತ್ನ ಪ್ರಕರಣ ದಾಖಲಾಗಿವೆ. ಸದ್ಯ ಆರೋಪಿಗಳನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ.

Last Updated : Jun 28, 2019, 11:15 AM IST

ABOUT THE AUTHOR

...view details