ಕರ್ನಾಟಕ

karnataka

By

Published : Jun 17, 2020, 6:54 PM IST

ETV Bharat / state

'ಚೀನಾ-ಭಾರತ ಪ್ರಧಾನಿಗಳ ಪರಸ್ಪರ ಅವಿಶ್ವಾಸದಿಂದ ಯುದ್ಧದ ವಾತಾವರಣ ಸೃಷ್ಟಿ'

ಕೊರೊನಾ ಸಂಕಷ್ಟದ ವೇಳೆಯಲ್ಲಿ ಭಾರತ ಹಾಗೂ ಚೀನಾ ನಡುವೆ ಗಡಿ ಸಂಘರ್ಷ ಏರ್ಪಟ್ಟಿರುವುದು ಸರಿಯಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ಎರಡು ದೇಶಗಳ ಸಾಮರಸ್ಯ ಹಾಳು ಮಾಡಬಾರದು. ಎರಡು ದೇಶಗಳು ಶಾಂತಿಯುತವಾಗಿ ಸಮಸ್ಯೆ ಬಗೆಹರಿಸಿಕೊಳ್ಳಬೇಕಿದೆ ಎಂದಿದ್ದಾರೆ.

India-china Prime Minister's Disbelief causing War situation in Border-Kumaraswamy
ಚೀನಾ-ಭಾರತ ಪ್ರಧಾನಿಗಳ ಅವಿಶ್ವಾಸದ ಹಿನ್ನೆಲೆ ಯುದ್ಧದ ವಾತಾವರಣ ಸೃಷ್ಟಿ-ಕುಮಾರಸ್ವಾಮಿ

ದೇವನಹಳ್ಳಿ (ಬೆಂ.ಗ್ರಾಂ): ಚೀನಾ ಮತ್ತು ಭಾರತದ ಗಡಿಯಲ್ಲಿ ಯುದ್ಧದ ಸನ್ನಿವೇಶ ಸೃಷ್ಟಿಯಾಗಿದೆ, ಚೀನಾ ಮತ್ತು ಭಾರತ ಪ್ರಧಾನಿಗಳ ಪರಸ್ಪರ ಅವಿಶ್ವಾಸದ ಹಿನ್ನೆಲೆ ಯುದ್ಧದ ವಾತಾವರಣ ಉಂಟಾಗಿದ್ದು, ಇದರಿಂದ ಅಮಾಯಕ ಯೋಧರ ಹತ್ಯೆಯಾಗುತ್ತಿದೆ. ಎರಡೂ ದೇಶಗಳ ನಡುವಿನ ಸಾಮರಸ್ಯ ಹಾಳು ಮಾಡಬಾರದು, ಶಾಂತಿಯುತವಾಗಿ ಸಮಸ್ಯೆ ಬಗೆಹರಿಸಕೊಳ್ಳಬೇಕು ಎಂದು ಮಾಜಿ ಸಿಎಂ ಎಚ್​ಡಿ ಕುಮಾರಸ್ವಾಮಿ ಹೇಳಿದ್ದಾರೆ.

ದೇವನಹಳ್ಳಿ ತಾಲೂಕಿನ ಕಾರಹಳ್ಳಿ ನೂತನ ಗ್ರಾಮ ಪಂಚಾಯಿತಿ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಇನ್ನೂ ಪ್ರಪಂಚಾದ್ಯಂತ ಕೋವಿಡ್ ಇರೋದ್ರಿಂದ ಜನರು ಆತಂಕದಲ್ಲಿದ್ದಾರೆ. ಈ ಸಂದರ್ಭದಲ್ಲಿ ನಮ್ಮ ದೇಶಕ್ಕೆ ಮತ್ತು ಚೀನಾಗೆ ಸಂಘರ್ಷ ಉಂಟಾಗಿರುವುದು ಸರಿಯಲ್ಲ. ಈ ಸಂಘರ್ಷ ವಿಶ್ವಕ್ಕೂ ಮತ್ತು ಎರಡು ದೇಶಗಳಿಗೆ ಉತ್ತಮ ಬೆಳವಣಿಗೆ ಅಲ್ಲ ಎಂದರು.

ಎರಡು ದೇಶಗಳ ಪ್ರಧಾನಿಗಳು ಅವಿಶ್ವಾಸದಿಂದ ಯುದ್ಧ ವಾತಾವರಣ ನಿರ್ಮಾಣ ಮಾಡಬೇಡಿ ಎಂದು ಹೆಚ್​​​ಡಿಕೆ ಮನವಿ ಮಾಡಿದರು. ಚೀನಾ ದೇಶದ ಪ್ರಧಾನಿ ಮೊಟ್ಟ ಮೊದಲು ಮಾತುಕತೆಗೆ ಬಂದಿದ್ದು ದೇವೇಗೌಡರು ಪ್ರಧಾನಿ ಆಗಿದ್ದಾಗ. ಆಗ ಎರಡು ದೇಶಗಳ ನಡುವೆ ಒಪ್ಪಂದ ಆಗಿತ್ತು. ಆದ್ರೆ ಅದು ಪ್ರಚಾರ ಆಗಲಿಲ್ಲ ಎಂದರು.

ಗಡಿ ವಿವಾದ ಬಗ್ಗೆ ದೆಹಲಿಯಲ್ಲಿ ಚೀನಾದ ಪ್ರಧಾನಿಯೊಂದಿಗೆ ಮಾತುಕತೆ ನಡೆದಿತ್ತು ಅಂತಾ ಹಿಂದಿನ ಮಾತುಕತೆ ಬಗ್ಗೆ ವಿವರಿಸಿದರು. ಜತೆಗೆ ಒಬ್ಬ ಕನ್ನಡಿಗ ಪ್ರಚಾರವಿಲ್ಲದೇ ದೇಶಕ್ಕೆ ಕೊಡುಗೆ ನೀಡಿದ್ದರು. ಆ ಸಮಯದಲ್ಲಿ ನಾನು ಲೋಕಸಭಾ ಸದಸ್ಯ ಆಗಿದ್ದೆ. ಈ ಕುರಿತು ಟಿ.ಎಸ್ ಸುಬ್ರಮಣ್ಯಂ ಎಂಬುವರು ಟರ್ನಿಂಗ್ ಪಾಯಿಂಟ್ ಎಂಬ ಪುಸ್ತಕ ಸಹ ಬರೆದಿದ್ದಾರೆ ಅಂತಾ ಹೆಚ್​​​ಡಿಕೆ ಚೀನಾ ಭಾರತ ಸಂಘರ್ಷದ ಕುರಿತು ಪ್ರತಿಕ್ರಿಯಿಸಿದರು.

ABOUT THE AUTHOR

...view details