ಕರ್ನಾಟಕ

karnataka

By

Published : Aug 16, 2019, 12:01 AM IST

ETV Bharat / state

ನೆರೆ ಹಾವಳಿಗೆ ಆಸ್ತಿ ಕಳೆದುಕೊಂಡ ವೃದ್ಧೆ ಮನನೊಂದು ಆತ್ಮಹತ್ಯೆ

ಬಾಲಗಕೋಟೆ ಜಿಲ್ಲೆಯ ರಾಮಥಾಳ ಗ್ರಾಮದ ವೃದ್ಧೆ ರೇವಣವ್ವ ನೆರೆ ಹಾವಳಿಯಿಂದ ಸಂಭವಿಸಿದ ಆಸ್ತಿ ಹಾನಿಗೆ ಮನನೊಂದು ಮಲಪ್ರಭಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಮೃತ ರೇವಣವ್ವ

ಬಾಗಲಕೋಟೆ:ನೆರೆ ಹಾವಳಿಯಿಂದಾಗಿ ಆಸ್ತಿಯನ್ನು ಕಳೆದುಕೊಂಡಿದ್ದ ಮಹಿಳೆಯೊಬ್ಬರು ಮನನೊಂದುಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ರಾಮಥಾಳ ಗ್ರಾಮದಲ್ಲಿ ನಡೆದಿದೆ.

ರಾಮಥಾಳ ಗ್ರಾಮದ ರೇವಣವ್ವ ಮಲ್ಲೇಶಪ್ಪ ಯರನಾಳ (60) ಮೃತರು.

ಮೃತ ರೇವಣವ್ವ

ಆ.13ರಂದು ಬೆಳಗ್ಗೆ 4 ಗಂಟೆಗೆ ಶೌಚಾಲಯಕ್ಕೆ ಹೋಗುವೆನೆಂದು ರಾಮಥಾಳ ಹಾಗೂ ಕಮತಗಿ ಮಧ್ಯ ಇರುವ ಮಲಪ್ರಭಾ ನದಿಗೆ ಅಡ್ಡಲಾಗಿ ನಿರ್ಮಿಸಿದ ಸೇತುವೆ ಮೇಲೆಯಿಂದ‌ ಜಿಗಿದ್ದಿದ್ದಾರೆ ಎನ್ನಲಾಗಿದೆ.

ಶೌಚಾಲಯಕ್ಕೆ ತೆರಳುವಾಗ ತೆಗೆದುಕೊಂಡು ಹೋದ ಬ್ಯಾಟರಿ, ಚಪ್ಪಲಿ ಸೇತುವೆ ಬಳಿ ದೊರೆತ್ತಿವೆ. ರೇವಣವ್ವ ಕಾಣೆಯಾದ ಕುರಿತು ಎರಡು ದಿನ ಕಾರ್ಯಾಚರಣೆ ಕೂಡಾ ನಡೆಸಲಾಗಿತ್ತು.

ಗುರುವಾರ ಇಂಗಳಗಿ ಹಾಗೂ ಬೇನಾಳ ಮಧ್ಯ ಇರುವ ಕಿರು ಸೇತುವೆ ಬಳಿಯ ಜಮೀನಿನಲ್ಲಿ ಸಿಕ್ಕಿದೆ. ಸ್ಥಳೀಯರು ಅಮೀನಗಡ ಠಾಣೆಗೆ ಮಾಹಿತಿ ನೀಡಿದ್ದು. ಪೊಲೀಸ್​ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ABOUT THE AUTHOR

...view details