ಕರ್ನಾಟಕ

karnataka

By

Published : Jan 11, 2020, 3:33 PM IST

ETV Bharat / state

ಅದ್ಧೂರಿಯಾಗಿ ಜರುಗಿತು ಬಾದಾಮಿ ಬನಶಂಕರಿ ದೇವಿ ಜಾತ್ರಾ ಮಹೋತ್ಸವ

ಲಕ್ಷಾಂತರ ಜನಸ್ತೋಮದ ಮದ್ಯೆ ದೇವಿಗೆ ಜೈಜೈಕಾರ ಕೂಗುವ ಮೂಲಕ‌  ಬಾದಾಮಿ ಬನಶಂಕರಿ ದೇವಿಯ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ಜರುಗಿತು.

Badami Banashankari Devi Jatra Mahotsav
ಅದ್ದೂರಿಯಾಗಿ ಜರುಗಿದ ಬಾದಾಮಿ ಬನಶಂಕರಿ ದೇವಿಯ ಜಾತ್ರಾ ಮಹೋತ್ಸವ

ಬಾಗಲಕೋಟೆ: ಉತ್ತರ ಕರ್ನಾಟಕ ಪ್ರಸಿದ್ಧ ಧಾರ್ಮಿಕ ಹಾಗೂ ಶಕ್ತಿ ಪೀಠ ಆಗಿರುವ ಬಾದಾಮಿ ಬನಶಂಕರಿ ದೇವಿಯ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ಜರುಗಿತು.

ಅದ್ದೂರಿಯಾಗಿ ಜರುಗಿದ ಬಾದಾಮಿ ಬನಶಂಕರಿ ದೇವಿಯ ಜಾತ್ರಾ ಮಹೋತ್ಸವ

ಲಕ್ಷಾಂತರ ಜನಸ್ತೋಮದ ಮದ್ಯೆ ದೇವಿ ಉದ್ಘೋಷ ಶಂಭೋಕೋ ಎಂದು ಜೈಜೈಕಾರ ಕೂಗುವ ಮೂಲಕ‌ ರಥೋತ್ಸವ ಜರುಗಿತು. ಬಾದಾಮಿ ಮತಕ್ಷೇತ್ರದ ಶಾಸಕರು ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನರು ಜಾತ್ರಾ ಮಹೋತ್ಸವದಲ್ಲಿ ಭಾಗಿಯಾಗಿದ್ದರು. ರಥೋತ್ಸವ ಎಳೆಯುವ ಸಮಯದಲ್ಲಿ ಪುಷ್ಪ ಸರ್ಮಪಣೆ ಮಾಡಿದರು.

ಈ ಸಂದರ್ಭದಲ್ಲಿ ಸೇರಿದ ಜನಸ್ತೋಮ ಹೌದು ಹುಲಿಯಾ ಎನ್ನುತ್ತಾ, ಮೊಬೈಲ್​ನಲ್ಲಿ ಪೋಟೋ ತೆಗೆದು ಜಾಗ ಬಿಟ್ಟುಕದಲಿಲ್ಲ. ಜನಸ್ತೋಮ ಉದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ, ಈ ವರ್ಷ ರಾಜ್ಯದಲ್ಲಿ ಯಾವುದೇ ರೀತಿಯ ತೊಂದರೆ ಆಗದಂತೆ ದೇವರು ಎಲ್ಲರಿಗೂ ಸುಖ ಸಮೃದ್ದಿಯಿಂದ ಇರುವಂತೆ ಮಾಡಲಿ ಎಂದು ಪ್ರಾರ್ಥನೆ ಸಲ್ಲಿಸೋಣ ಎಂದು ತಿಳಿಸಿದರು.

ರಥೋತ್ಸವ ನಂತರ ಬನಶಂಕರಿ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದರು. ದೇವಾಲಯ ಸಮಿತಿಯಿಂದ ಸಿದ್ದರಾಮಯ್ಯಗೆ ಸನ್ಮಾನಿಸಲಾಯಿತು.

ABOUT THE AUTHOR

...view details