ಕರ್ನಾಟಕ

karnataka

By

Published : Nov 1, 2021, 11:30 PM IST

ETV Bharat / sports

T20 World Cup:ಚಹಾಲ್ ಟಿ20 ವಿಶ್ವಕಪ್​ ಆಡದಿರುವುದು ದುರಾದೃಷ್ಟಕರ: ಇಮ್ರಾನ್ ತಾಹೀರ್​

ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡ ವಿಶ್ವಕಪ್​ನಲ್ಲಿ ಯಾವುದೇ ಪ್ರತಿರೋಧ ತೋರದೆ ಪಾಕಿಸ್ತಾನ ಮತ್ತು ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯಗಳಲ್ಲಿ ಸೋಲು ಕಾಣುತ್ತಿದ್ದಂತೆ ಚಹಾಲ್​ ಸೇರಿದಂತೆ ಕೆಲವು ಆಟಗಾರರನ್ನು ತಂಡದಿಂದ ಕೈಬಿಟ್ಟ ಆಯ್ಕೆಸಮಿತಿಯ ನಿರ್ಧಾರವನ್ನು ಎಲ್ಲರೂ ಪ್ರಶ್ನಿಸುತ್ತಿದ್ದಾರೆ. ದಫ್ರಿಕಾದ ಸ್ಪಿನ್ನರ್ ತಾಹೀರ್ ಕೂಡ ಚಹಾಲ್ ವಿಶ್ವಕಪ್ ಆಡದಿರುವುದು ನಿಜಕ್ಕೂ ದುರದೃಷ್ಟಕರ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Imran Tahir - Yuzvendra Chahal
ಇಮ್ರಾನ್ ತಾಹೀರ್​ ಚಹಾಲ್

ದುಬೈ: ಭಾರತದ ಪ್ರತಿಭಾನ್ವಿತ ಸ್ಪಿನ್​ ಬೌಲರ್​ ಯುಜ್ವೇಂದ್ರ ಚಹಾಲ್​ ಪ್ರಸ್ತುತ ನಡೆಯುತ್ತಿರುವ ಟಿ20 ವಿಶ್ವಕಪ್​ನಲ್ಲಿ ಆಡದಿರುವುದ ತಮಗೆ ಆಶ್ಚರ್ಯ ತಂದಿದೆ. ಭಾರತದ ಲೆಗ್​ ಸ್ಪಿನ್ನರ್​ ತಮ್ಮ ವೇರಿಯೇಶನ್​ಗಳಿಂದ ಪಂದ್ಯದ ಗತಿಯನ್ನ ಕೆಲವೇ ನಿಮಿಷಗಳಲ್ಲಿ ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿದ್ದರು ಎಂದು ದಕ್ಷಿಣ ಆಫ್ರಿಕಾದ ಹಿರಿಯ ಬೌಲರ್​ ಇಮ್ರಾನ್ ತಾಹೀರ್ ಹೇಳಿದ್ದಾರೆ.

ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡ ವಿಶ್ವಕಪ್​ನಲ್ಲಿ ಯಾವುದೇ ಪ್ರತಿರೋಧ ತೋರದೆ ಪಾಕಿಸ್ತಾನ ಮತ್ತು ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯಗಳಲ್ಲಿ ಸೋಲು ಕಾಣುತ್ತಿದ್ದಂತೆ ಚಹಾಲ್​ ಸೇರಿದಂತೆ ಕೆಲವು ಆಟಗಾರರನ್ನು ತಂಡದಿಂದ ಕೈಬಿಟ್ಟ ಆಯ್ಕೆಸಮಿತಿಯ ನಿರ್ಧಾರವನ್ನು ಎಲ್ಲರೂ ಪ್ರಶ್ನಿಸುತ್ತಿದ್ದಾರೆ. ದ. ಆಫ್ರಿಕಾದ ಸ್ಪಿನ್ನರ್ ತಾಹೀರ್ ಕೂಡ ಚಹಾಲ್ ವಿಶ್ವಕಪ್ ಆಡದಿರುವುದು ನಿಜಕ್ಕೂ ದುರಾದೃಷ್ಟಕರ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಚಹಾಲ್ ಒಬ್ಬ ಅದ್ಭುತ ಬೌಲರ್​. ನಾನು ವೈಯಕ್ತಿಕವಾಗಿ ಅವರು ಟಿ20 ವಿಶ್ವಕಪ್​ನಲ್ಲಿ ಆಡುವುದನ್ನು ನೋಡಲು ಬಯಸಿದ್ದೆ. ಆದರೆ ದುರಾದೃಷ್ಟವಶಾತ್​ ಅವರನ್ನು ತಂಡಕ್ಕೆ ಆಯ್ಕೆ ಮಾಡಲಿಲ್ಲ ಎಂದು ಅಬುಧಾಬಿ ಟಿ10 ಲೀಗ್​ ಆಯೋಜಿಸಿದ್ದ ಮಾಧ್ಯಮಗೋಷ್ಠಿಯಲ್ಲಿ ಇಮ್ರಾನ್ ತಾಹೀರ್ ಹೇಳಿದರು.

ಎಲ್ಲಾ ಲೆಗ್​ ಸ್ಪಿನ್ನರ್​ಗಳು ವಿಭಿನ್ನವಾದ ವೇರಿಯೇಶನ್​ಗಳನ್ನು ಹೊಂದಿರುತ್ತಾರೆ. ಇದು ಕೇವಲ ಗೂಗ್ಲಿ ಮತ್ತು ಲೆಗ್​ಬ್ರೇಕ್​ ಮಾತ್ರವಲ್ಲದೆ, ಅಲ್ಲಿ ಟಾಪ್​ ಸ್ಪಿನ್ನರ್, ಫ್ಲಿಪ್ಪರ್ ಮತ್ತು ಸ್ಲೈಡರ್​ ಇರುತ್ತವೆ. ಹಾಗಾಗಿ ಲೆಗ್​ ಸ್ಪಿನ್ನರ್​ಗಳು ಪಂದ್ಯದಲ್ಲಿ ಬಹುದೊಡ್ಡ ಪಾತ್ರವಹಿಸುತ್ತಾರೆ. 10 ವರ್ಷಗಳ ಹಿಂದೆ ಬ್ಯಾಟರ್​ಗಳು ಸ್ಪಿನ್​ಗೆ ಆಡುತ್ತಿದ್ದಷ್ಟು ಸುಲಭವಾಗಿ ಈಗ ಆಡಲು ಸಾಧ್ಯವಿಲ್ಲ. ಇದರ ಕ್ರೆಡಿಟ್​ ಸ್ಪಿನ್ನರ್ಸ್ ಮತ್ತು ಫೀಲ್ಡ್​ ಸೆಟಿಂಗ್ ಮಾಡುವರಿಗೆ ಸಲ್ಲಬೇಕು ಎಂದು ತಿಳಿಸಿದ್ದಾರೆ.

ಇದನ್ನು ಓದಿ:ಕ್ರೀಡೆಯಲ್ಲಿ ಸೋಲಿಲ್ಲದವರ್ಯಾರು ಇಲ್ಲ: ಕೊಹ್ಲಿ ಪಡೆಯ ಬೆನ್ನಿಗೆ ನಿಲ್ಲುವಂತೆ ಭಾರತೀಯರಿಗೆ ಪೀಟರ್ಸನ್​ ಮನವಿ

ABOUT THE AUTHOR

...view details