ಕರ್ನಾಟಕ

karnataka

By

Published : Jun 30, 2021, 7:55 PM IST

ETV Bharat / sports

ಬಯೋ ಬಬಲ್​ ಉಲ್ಲಂಘಿಸಿದ ಲಂಕಾ ಪ್ಲೇಯರ್ಸ್​.. ಭಾರತ ಸರಣಿಯಿಂದ ಹೊರಕ್ಕೆ!

ಇಂಗ್ಲೆಂಡ್​ನಲ್ಲಿ ಬಯೋಬಬಲ್​ ನಿಯಮ ಉಲ್ಲಂಘನೆ ಮಾಡಿರುವ ಶ್ರೀಲಂಕಾದ ಮೂವರು ಪ್ಲೇಯರ್ಸ್​ಗೆ ಇದೀಗ ಮತ್ತಷ್ಟು ಕಠಿಣ ಶಿಕ್ಷೆ ನೀಡಲಾಗಿದೆ.

Three Sri Lankan cricket players
Three Sri Lankan cricket players

ಚೆಸ್ಟರ್-ಲೆ-ಸ್ಟ್ರೀಟ್:ಇಂಗ್ಲೆಂಡ್​ ವಿರುದ್ಧದ ಕ್ರಿಕೆಟ್​ ಸರಣಿ ವೇಳೆ ಬಯೋ ಬಬಲ್​ ಉಲ್ಲಂಘನೆ ಮಾಡಿರುವ ಲಂಕಾದ ಮೂವರು ಪ್ಲೇಯರ್ಸ್​ಗೆ ಇದೀಗ ಮತ್ತಷ್ಟು ಸಂಕಷ್ಟ ಉಂಟಾಗಿದ್ದು, ಭಾರತ ವಿರುದ್ಧದ ಸರಣಿಯಿಂದಲೂ ಅವರನ್ನು ಹೊರಗಿಡಲಾಗಿದೆ ಎಂದು ವರದಿಯಾಗಿದೆ.

ಇಂಗ್ಲೆಂಡ್​ ವಿರುದ್ಧದ ಕೊನೆಯ ಟಿ-20 ಪಂದ್ಯ ಮುಕ್ತಾಯವಾಗುತ್ತಿದ್ದಂತೆ ಲಂಕಾದ ಉಪನಾಯಕ ಕುಶಾಲ್ ಮೆಂಡಿಸ್​, ಆರಂಭಿಕ ಆಟಗಾರ ದನುಷ್ಕಾ ಗುಣ ತಿಲಕ್​ ಹಾಗೂ ವಿಕೆಟ್ ಕೀಪರ್​​​ ನಿರೋಶನ್ ಡಿಕ್ವೆಲ್ಲಾ ಬಯೋಬಬಲ್​​ ಉಲ್ಲಂಘನೆ ಮಾಡಿ ಅಲ್ಲಿನ ಬಿದಿಗಳಲ್ಲಿ ಸುತ್ತಾಡಿದ್ದರು. ಇದಕ್ಕೆ ಸಂಬಂಧಿಸಿದಂತೆ ವಿಡಿಯೋವೊಂದು ವೈರಲ್​ ಆಗಿತ್ತು.

ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿರುವ ಶ್ರೀಲಂಕಾ ಕ್ರಿಕೆಟ್ ಮಂಡಳಿ, ಅವರನ್ನ ಇಂಗ್ಲೆಂಡ್​ ವಿರುದ್ಧದ ಏಕದಿನ ಸರಣಿಯಿಂದ ಕೈಬಿಡಲಾಗಿದ್ದು, ಲಂಕಾಗೆ ವಾಪಸ್​ ಆಗುವಂತೆ ಸೂಚನೆ ನೀಡಿದೆ. ಇದರ ಬೆನ್ನಲ್ಲೇ ಜುಲೈ ತಿಂಗಳು ಭಾರತದ ವಿರುದ್ಧದ ಟಿ - 20 ಹಾಗೂ ಏಕದಿನ ಪಂದ್ಯಗಳಿಂದಲೂ ಕೈಬಿಡಲು ನಿರ್ಧಾರ ಮಾಡಿದೆ.

ಇದನ್ನೂ ಓದಿರಿ: ಬಯೋಬಬಲ್​ ಉಲ್ಲಂಘನೆ: ಮೆಂಡಿಸ್​ ಸೇರಿ ಲಂಕಾದ ಮೂವರು ಕ್ರಿಕೆಟರ್ಸ್ ಅಮಾನತು

ಇಂಗ್ಲೆಂಡ್​ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಸೋತಿರುವ ಲಂಕಾ ನಾಳೆ ಎರಡನೇ ಪಂದ್ಯವನ್ನಾಡಲಿದ್ದು, ಫೈನಲ್ ಪಂದ್ಯ ಭಾನುವಾರ ನಡೆಯಲಿದೆ.

ABOUT THE AUTHOR

...view details